ಒಡೆದ ಸಂಸಾರ ಒಂದಾಯ್ತು.. ದೂರವಾಯ್ತು ವಿಜಿ ನಾಗರತ್ನ ವೈಮನಸ್ಯ

ಗುರುವಾರ, 20 ನವೆಂಬರ್ 2014 (11:07 IST)
ಅಂತೂ ಇಂತೂ ಒಡೆದ ಬದುಕು ಒಂದಾಯಿತು. ಚಿದ್ರವಾಗಲು ಹೊರಟಿದ್ದ ದಾಂಪತ್ಯ ಒಗ್ಗೂಡಿತು. ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಗಳು ಒಂದಾದರು. ವಿಚ್ಛೇದನ ಎನ್ನುವ ಮಹಾಮಾರಿ ಅವರ ಬದುಕಿನಿಂದ ತೊಲಗಿ ಹೋಯ್ತು. ನಟ ದುನಿಯಾ ವಿಜಯ್ ಸಂಸಾರದಲ್ಲಿ  ಅದ್ಯಾವ ಕಾರಣಕ್ಕೋ ಏನೋ  ಬಿರುಕು ಮೂಡಿತ್ತು. ಇದರಿಂದ ಆ ದಾಂಪತ್ಯ ವಿಚ್ಛೇದನದವರೆಗೂ ನಡೆದಿತ್ತು.
 
 ಆ ದಂಪತಿಗಳು ಮತ್ತೆ ಒಂದಾಗುವ ಮನಸ್ಸು ಮಾಡಿದ್ದಾರೆ. ಮಕ್ಕಳಿಗೆ ಒಳ್ಳೆಯ ಬದುಕು ನೀಡಲು ಸಿದ್ಧವಾಗಿದ್ದಾರೆ. ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ನೀಡಲು ದುನಿಯಾ ವಿಜಯ್ ಬಯಸಿದ್ದರು. ಅದಕ್ಕೆ ಪೂರಕವಾಗಿ ಎರಡು ಕಡೆ ವಾದ ವಿವಾದಗಳು ನಡೆದು ಅಂತಿಮವಾಗಿ ಸುಖಾಂತ್ಯ ಕಂಡಿದೆ. 
ಎರಡು ಕಡೆಯವರ ವಾದ ವಿವಾದಗಳನ್ನು ಆಲಿಸಿದ ಕೆ.ಎಸ್ ಶ್ರೀನಿವಾಸ್ ಈ ಜೋಡಿಯ ಮನಸ್ತಾಪ ದೂರ ಮಾಡಿ ಸಂಸಾರ ನಡೆಸಲು ಸಹಾಯ ಮಾಡಿದ್ದಾರೆ.  
 
ಅಷ್ಟೇ ಅಲ್ಲದೆ ವಿಚ್ಛೇದನ ಪ್ರಕರಣಗಳನ್ನು ಹಿಂಪಡೆಯುವಂತೆ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಒಡೆದ ಸಂಸಾರ ಒಂದಾಗಿದೆ. ಚಿತ್ರಬದುಕಲ್ಲಿ ತನಗೊಂದು ಸ್ಥಾನ ಪಡೆಯ ಸಾಕಷ್ಟು ಪ್ರಯತ್ನ ಪಟ್ಟಿದ್ದ ವಿಜಯ್ ಅವರಿಗೆ ದುನಿಯಾ ಚಿತ್ರ ಕೈ ಹಿಡಿಯಿತು. ಅದಾದ ಬಳಿಕ ಅವರು ನಿರ್ದೇಶಕರ ನಟರಾಗಿ ಬೆಳೆದರು. ಆದರೆ ಅದ್ಯಾವ ಕೆಟ್ಟ ಗಳಿಗೆಯೋ ವಿಜಯ್ ಅವರ ವೈವಾಹಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿತು . ಈಗ ಎಲ್ಲ ಸರಿಯಾಗಿದೆ. ಈ ಜೋಡಿ ಒಂದಾಗಿದ್ದಾರೆ. ಅವರ ಬದುಕು ಸುಖಕರ ಆಗಿರಲಿ ಎನ್ನುವ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ. 
 

ವೆಬ್ದುನಿಯಾವನ್ನು ಓದಿ