ಅಷ್ಟೇ ಅಲ್ಲದೆ ವಿಚ್ಛೇದನ ಪ್ರಕರಣಗಳನ್ನು ಹಿಂಪಡೆಯುವಂತೆ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಒಡೆದ ಸಂಸಾರ ಒಂದಾಗಿದೆ. ಚಿತ್ರಬದುಕಲ್ಲಿ ತನಗೊಂದು ಸ್ಥಾನ ಪಡೆಯ ಸಾಕಷ್ಟು ಪ್ರಯತ್ನ ಪಟ್ಟಿದ್ದ ವಿಜಯ್ ಅವರಿಗೆ ದುನಿಯಾ ಚಿತ್ರ ಕೈ ಹಿಡಿಯಿತು. ಅದಾದ ಬಳಿಕ ಅವರು ನಿರ್ದೇಶಕರ ನಟರಾಗಿ ಬೆಳೆದರು. ಆದರೆ ಅದ್ಯಾವ ಕೆಟ್ಟ ಗಳಿಗೆಯೋ ವಿಜಯ್ ಅವರ ವೈವಾಹಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿತು . ಈಗ ಎಲ್ಲ ಸರಿಯಾಗಿದೆ. ಈ ಜೋಡಿ ಒಂದಾಗಿದ್ದಾರೆ. ಅವರ ಬದುಕು ಸುಖಕರ ಆಗಿರಲಿ ಎನ್ನುವ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ.