ಹೆಸರು ಬದಲಾವಣೆ ಮಾಡಿಕೊಳ್ಳುವ ಪರಿಪಾಟ ಕೇವಲ ರಾಜಕೀಯ ನಾಯಕರಿಗೆ ಮಾತ್ರವಲ್ಲ ಸಿನಿ ಮಂದಿಗೂ ಸಹಿತ ಇದೆ. ಆರಂಭದಲ್ಲಿ ಒಂದು ಹೆಸರಿದ್ದು, ಆ ಬಳಿಕ ಅದು ಬದಲಾಗಿ, ಕೊನೆಗೆ ಅದೇ ಹೆಸರಿಗೆ ಬರುವ ಅಥವಾ ಅದೃಷ್ಟಕ್ಕಾಗಿ ಹುಡುಕಾಡುತ್ತಾ ಮತ್ತೊಂದು ಹೆಸರನ್ನು ತಮ್ಮ ಹೆಸರೊಂದಿಗೆ ಜೋಡಿಸಿಕೊಳ್ಳುವ ಪದ್ಧತಿ ಇದ್ದೇ ಇದೆ. ಅದರಲ್ಲಿ ಈಗ ಅಜಯ್ ರಾವ್ ಸಹ ಸೇರಿದ್ದಾರೆ. ಕನ್ನಡ ಚಿತ್ರರಂಗದ ಚಾಕೋಲೆಟ್ ಹೀರೋ ಅಜಯ್ ರಾವ್ ಅವರು ರೋಸ್ ಚಿತ್ರದಲ್ಲಿ ತಮ್ಮ ಹೆಸರನ್ನು ಕೃಷ್ಣ ಅಜಯ್ ರಾವ್ ಎಂದು ಬದಲಾಯಿಸಿಕೊಂಡ ಬಳಿಕ ಅದೃಷ್ಟ ಬದಲಾಗಿದೆ. ಅವರ ಕೈಲಿ ಅನೇಕ ಅವಕಾಶಗಳಿವೆ. ಅಲ್ಲದೆ ನಟನೆಯ ಚಿತ್ರಗಳಿಗೆ ಜೀವದಾನ ಮಾಡಿದೆ. ಅವುಗಳು ಈಗ ಬಿಡುಗಡೆಯತ್ತ ಇದೆ.
ಜೈ ಬಜರಂಗ ಬಲಿ ಚಿತ್ರದಲ್ಲಿ ಸಿಂಧು ಲೋಕ ನಾಥ್ ಜೊತೆ ನಟಿಸಿದ್ದು ಆ ಚಿತ್ರದ ಅಂತಿಮ ಹಂತದ ಕಾರ್ಯ ಈಗ ನಡೆಯುತ್ತಿದೆ. ಅಲ್ಲದೆ ಸೆಕೆಂಡ್ ಹ್ಯಾಂಡ್ ಹೀರೋ ಎನ್ನುವ ಚಿತ್ರ ಈಗಾಗಲೇ ಕೆಲಸ ಮುಗಿಸಿದೆ, ಇನ್ನು ಹೋಂ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಕೃಷ್ಣ ಲೀಲಾ ಚಿತ್ರದ ಮಾತಿನ ಭಾಗ ಮತ್ತು ಹಾಡುಗಳ ಕೆಲಸ ಪೂರ್ಣವಾಗಿದೆ.