ನನ್ನ ಮಗಳು ಮಾತ್ರ ನನ್ನ ಜವಾಬ್ಧಾರಿ: ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ರಿಯಾಕ್ಷನ್

Krishnaveni K

ಶನಿವಾರ, 31 ಆಗಸ್ಟ್ 2024 (14:31 IST)
Photo Credit: X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿಬಂಧಿತರಾಗಿರುವ ನಟ ದರ್ಶನ್ ರನ್ನು ನೋಡಲು ಜೈಲಿಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ.

ಇಂದು ಹುಟ್ಟುಹಬ್ಬಕ್ಕೆ ಪೂರ್ವಭಾವಿಯಾಗಿ ಮಾಧ್ಯಮಗೋಷ್ಠಿ ನಡೆಸಿದ ಕಿಚ್ಚ ಸುದೀಪ್ ಗೆ ದರ್ಶನ್ ಬಗ್ಗೆ ಸಾಕಷ್ಟು ಪ್ರಶ್ನೆ ಎದುರಾಯಿತು. ಈ ವೇಳೆ ದರ್ಶನ್ ನೋಡಲು ನೀವು ಜೈಲಿಗೆ ಹೋಗ್ತೀರಾ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

‘ಒಂದು ವೇಳೆ ಹೊರಗಡೆ ಇದ್ದಾಗ ನಾವು ಪರಸ್ಪರ ಮಾತನಾಡುತ್ತಿದ್ದರೆ, ಉತ್ತಮ ಬಾಂಧವ್ಯವಿದ್ದರೆ ಹೋಗುತ್ತಿದ್ದೆನೇನೋ. ಹೊರಗಡೆ ಇದ್ದಾಗಲೇ ಮಾತಿಲ್ವಲ್ಲ? ಮತ್ತೆ ಈಗ ಹೇಗೆ ಹೋಗಲಿ. ಮತ್ತೆ ನಾನು ಯಾರಿಗೂ ಹೋಗಿ ಹೀಗೆ ಮಾಡಿ, ಹಾಗೆ ಮಾಡಿ ಎಂದು ಉಪದೇಶ ಕೊಡಲಾಗದು. ನಾನೇನು ದೊಡ್ಡ ಸನ್ಯಾಸಿ ಅಲ್ಲ. ನನ್ನ ಮಗಳು ಮಾತ್ರ ನನ್ನ ಜವಾಬ್ಧಾರಿ. ಅವಳ ಹೊರತು ನಾನು ಯಾರಿಗೂ ಉಪದೇಶ ಕೊಡಲು ಸಾಧ್ಯವಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನು, ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಬಿಡುಗಡೆಯಾಗುವವರೆಗೂ ಯಾವುದೇ ಸಿನಿಮಾ ನೋಡಬೇಡಿ ಎಂದು ಕರೆಕೊಟ್ಟಿರುವ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, ಎಲ್ಲರನ್ನೂ ನಾವು ಸಿನಿಮಾ ನೋಡಲು ಬನ್ನಿ ಎಂದು ಕರೆಯಬಹುದು. ಹಾಗಂತ ಯಾರನ್ನೂ ಒತ್ತಾಯ ಮಾಡಿ ಬಂದು ಕೂರಿಸಲು ಸಾಧ್ಯವಿಲ್ಲ. ಇದೆಲ್ಲಾ ಸ್ವಲ್ಪ ಸಮಯ ಕಳೆದ ಮೇಲೆ ಸರಿಹೋಗುತ್ತದೆ. ಅಲ್ಲಿಯವರೆಗೆ ಕಾಯಬೇಕು ಅಷ್ಟೇ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ