ಟೀ ಪಾರ್ಟಿಯಲ್ಲಿ ದರ್ಶನ್‌ಗೆ ಸಾಥ್ ನೀಡಿದ್ದ ನಾಗರಾಜ್ ಕಲಬುರಗಿ ಜೈಲಿಗೆ ಶಿಫ್ಟ್‌

Sampriya

ಭಾನುವಾರ, 1 ಸೆಪ್ಟಂಬರ್ 2024 (17:18 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ11 ಆರೋಪಿ, ದರ್ಶನ್ ಮ್ಯಾನೇಜರ್ ನಾಗಾ ಅಲಿಯಾಸ್ ನಾಗರಾಜ್‌ನನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರದ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಫೋಟೋದಲ್ಲಿ ನಾಗರಾಜ್ ಕೂಡ ಭಾಗಿಯಾಗಿದ್ದ. ವಿಲ್ಸನ್ ಗಾರ್ಡನ್ ನಾಗ ಆಯೋಜಿಸಿದ್ದ ಟೀ ಪಾರ್ಟಿಯಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್ ಹಾಗೂ ನಾಗರಾಜ್ ಭಾಗಿಯಾಗಿದ್ದರು. ಈ ಫೋಟೋ ವೈರಲ್ ಬೆನ್ನಲ್ಲೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಿದೆ.

ಅದರಂತೆ ಇದೀಗ ನಾಗರಾಜ್‌ನನ್ನು ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್‌ಗಳ ನಡುವೆ ಕರೆತರಲಾಗಿದೆ.

ಆರೋಪಿ ನಾಗರಾಜ್ ಜೊತೆಗೆ ಪ್ರಕರಣದ ಜೊತೆಗೆ ಎ-೧೦ ಆರೋಪಿಯಾಗಿರುವ ವಿನಯ್‌ನನ್ನು ವಿಜಯಪುರದ ಕಾರಾಗೃಹಕ್ಕೆ ಬಿಟ್ಟ ಬಳಿಕ,ಎ-೧೧ ಆರೋಪಿಯಾದ ನಾಗರಾಜ್,ನನ್ನು ಪೋಲಿಸರು ಕರೆತಂದಿದ್ದಾರೆ.

ಕಲಬುರಗಿ ಕೇಂದ್ರ ಕಾರಾಗೃಹದ ಗೇಟ್ ಬಳಿಯ ತಪಾಸಣೆ ಕೋಣೆಯಲ್ಲಿ ಸಾಮಾನ್ಯ ಕೈದಿಗಳಂತೆ ನಾಗರಾಜ್‌ನನ್ನು ತಪಾಸಣೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ