ಪೊಲೀಸರ ಕೈಗೆ ಸಿಕ್ಕದಿದ್ದರೂ ನಯನಾ ಅಭಿನಯದ ಭಕ್ತಿಪ್ರಧಾನ ಚಿತ್ರ ರಿಲೀಸ್

ಭಾನುವಾರ, 21 ಸೆಪ್ಟಂಬರ್ 2014 (10:31 IST)
ವೈದ್ಯರಿಗೆ ಬ್ಲಾಕ್‌ಮೇಲ್ ಮಾಡಿರುವ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನಟಿ ನಯನಾ ಕೃಷ್ಣ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ. ಪೊಲೀಸರು ನಯನಾಕೃಷ್ಣ ಮನೆಗೆ ನೋಟಿಸ್ ಕೂಡ ಅಂಟಿಸಿದ್ದಾರೆ. ಆದರೆ ನಯನಾ ಕೃಷ್ಣ ಅಭಿನಯಿಸಿರುವ ಭಕ್ತಿಪ್ರಧಾನ ಚಿತ್ರ ಜ್ಯೋತಿರ್ಗಮಯಂನಲ್ಲಿ  ಗಾಣಗಿತ್ತಿ ಮಾಯಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರ ಡಿಸೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.

ವೈದ್ಯರಿಗೆ ಬ್ಲಾಕ್‌ಮೇಲ್ ಮಾಡಲು ಅವರ ರಾಜವರ್ಮಾ ಡಿವಿಜಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ.

ಕೊಟ್ನಲ್ಲಪ್ಪೋ ಕೈ ಚಿತ್ರದಲ್ಲಿ ನಾಯಕ ನಟಿಯಾಗಿ ಅವರು ಅಭಿನಯಿಸಿದ್ದರು. ಈ ಚಿತ್ರದ ನಿರ್ದೇಶಕ ರಿಷಿ ಜೊತೆ ಜಗಳವಾಡಿ ಚಪ್ಪಲಿಯಲ್ಲಿ ಕೂಡ ಹೊಡೆದು ನಯನ ಕೃಷ್ಣ ಸುದ್ದಿಮಾಡಿದ್ದಳು. 

ವೆಬ್ದುನಿಯಾವನ್ನು ಓದಿ