ಅರಗಿಣಿ ಧಾರವಾಹಿ ನಟಿ ಮೇಘನಾ ಗೌಡ ಪ್ರಕರಣಕ್ಕೆ ಹೊಸ ತಿರುವು

ಶನಿವಾರ, 5 ನವೆಂಬರ್ 2016 (13:13 IST)
ಬೆಂಗಳೂರು: ಅರಗಿಣಿ ಧಾರವಾಹಿ ಖ್ಯಾತಿಯ ನಟಿ ಮೇಘನಾ ಗೌಡ ತಮ್ಮ ಮೇಲೆ ಪ್ರಿಯಕರ ಹರೀಶ್ ತಮ್ಮ ಹಲ್ಲೆ ನಡೆಸಿದ್ದರೆಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಅವರಿಬ್ಬರ ನಡುವೆ ನಡೆದ ಕೊನೆಯ ಫೋನ್ ಸಂಭಾಷಣೆಯ ತುಣುಕುಗಳು ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿದೆ. ತಮ್ಮಿಬ್ಬರ ಮಧ್ಯೆ ಪ್ರೀತಿಯಿತ್ತು. ಲಿವಿಂಗ್ ಟುಗೆದರ್ ಸಂಬಂಧವಿತ್ತು. ಹರೀಶ್ ತೀರಿಕೊಳ್ಳುವ ಅಂತಿಮ ಕ್ಷಣದವರೆಗೂ ಜತೆಯಿದ್ದೆ ಎಂದಿದ್ದ ಮೇಘನಾ ಹೇಳಿಕೆ ಸುಳ್ಳು ಎನ್ನುವಂತಹ ಸಂಭಾಷಣೆ ಇದರಲ್ಲಿದೆ.

ಈ ಫೋನ್ ಸಂಭಾಷಣೆಯಲ್ಲಿ ಅವರಿಬ್ಬರ ಸಂಬಂಧ ಸರಿಯಿರಲಿಲ್ಲ. ಮೇಘನಾ ಹರೀಶ್ ಅವರಿಂದ ದೂರವಾಗಲು ಬಯಸಿದ್ದರು ಎಂಬುದು ಸ್ಪಷ್ಟವಾಗಿದೆ. ಹರೀಶ್ ಜತೆ ಬದುಕಲು ಇಷ್ಟವಿಲ್ಲ ಎಂದು ನೇರವಾಗಿ ಮೇಘನಾ ಹೇಳುವ ಸಂಭಾಷಣೆಗಳು ಇದರಲ್ಲಿವೆ.

ಅಲ್ಲದೆ, ಹರೀಶ್ ತನ್ನ ಹಣ, ಕಾರು ವಾಪಸ್ ಮರಳಿ ಪಡೆಯಲು ಬಯಸುವುದಾಗಿ ಹೇಳಿರುವುದೂ ಸ್ಪಷ್ಟವಾಗಿದೆ. ಹೀಗಾಗಿ ಮೇಘನಾ ಪೊಲೀಸರಿಗೆ ದೂರು ಕೊಟ್ಟಿರುವುದಕ್ಕೂ ಈ ಸಂಭಾಷಣೆಯಲ್ಲಿ ಹೇಳಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ