ಸಿದ್ದರಾಮಯ್ಯ ಬಯೋಪಿಕ್ ಪಾರ್ಟ್ 1 ಗೆ ನಿರೂಪ್ ಭಂಡಾರಿ ಹೀರೋ: 50 ಕೋಟಿ ವೆಚ್ಚ

ಬುಧವಾರ, 2 ಆಗಸ್ಟ್ 2023 (16:30 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ನಿಜ ಜೀವನ ಕತೆಯನ್ನಾಧರಿಸಿದ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗಕ್ಕೆ ನಿರೂಪ್ ಭಂಡಾರಿ ಹೀರೋ ಎನ್ನಲಾಗಿದೆ.

ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ ಎರಡನೇ ಭಾಗದಲ್ಲಿ ತಮಿಳಿನ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಚಿತ್ರತಂಡ ಈಗ ಇಬ್ಬರು ನಟರೊಂದಿಗೆ ಮಾತುಕತೆ ನಡೆಸುತ್ತಿದೆ.

50 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಸತ್ಯ ರತ್ನಂ ನಿರ್ದೇಶನ ಮಾಡುತ್ತಿದ್ದಾರೆ.  ಎಂಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ