ಸಹಜೀವನದ ಬಗ್ಗೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ನಿತ್ಯಾ ಮೆನನ್

ಗುರುವಾರ, 30 ಜುಲೈ 2015 (10:25 IST)
ಬೆಂಗಳೂರಿನ ಮೂಲದ  ಮಲೆಯಾಳಿ  ನಟಿ ನಿತ್ಯ ಮೆನನ್ ಈಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಪರಿಚಿತರಾಗಿರುವ ಚೆಲುವೆ. ಈ ಬಬ್ಲಿ ಚೆಲುವೆ ಕನ್ನಡ, ತೆಲುಗು, ಮಲೆಯಾಳಂ, ತಮಿಳು ಸಿನಿರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅವರ ಅಭಿನಯ, ಎಕ್ಸ್ಪೋಸ್ ಎಲ್ಲವೂ ಜನರ ಗಮನ ಸೆಳೆದಿದೆ. ಈ ತಾರೆ ಈಗ ಒಂದರ್ಥದಲ್ಲಿ ಸ್ಟಾರ್ ನಟಿ ಆಗಲು ಅತಿ ಸಮೀಪದಲ್ಲಿರುವ ತಾರೆ. ಅತ್ಯಂತ ಬ್ಯುಸಿ ಹೀರೋಯಿನ್ ಆಗಿರುವ ಈ ಚೆಲುವೆ ಏನಾದರೊಂದು ವಿವಾದಿತ ಹೇಳಿಕೆ ನೀಡುತ್ತಿರುತ್ತಾರೆ. ಅವರು ಇತ್ತೀಚಿಗೆ ಡೇಟಿಂಗ್ ಬಗ್ಗೆ ಮಾತನಾಡುತ್ತಾ.... 
ಗಂಡು ಹೆಣ್ಣು ಒಟ್ಟಿಗೆ ಇಷ್ಟಪಟ್ಟು ಇದ್ದಾರೆ ತಪ್ಪು ತಿಳಿಯುತ್ತಾರೆ, ಆದರೆ ಮದುವೆ ಆದ ಜೋಡಿಗಳಲ್ಲಿ ಎಷ್ಟುಮಂದಿ ಸಂತೋಷವಾಗಿದ್ದಾರೆ.ಮದುವೆಗೆ ಮುನ್ನ ಸಹಜೀವನ ಮಾಡಿದರೆ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಅರ್ಥ ಆಗುತ್ತದೆ.ಇಷ್ಟವಾದರೆ ಹೆಚ್ಚು ಕಾಲ ಇರುತ್ತಾರೆ, ಇಲ್ಲದೆ ಹೋದರೆ ದೂರವಾಗುತ್ತಾರೆ ಎಂದು ಸಹಜೀವನದ ಬಗ್ಗೆ ಆಕೆ ಪೂರ್ಣ ಸಮ್ಮತಿ ಮುದ್ರೆ ನೀಡಿದ್ದಾರೆ. 
 
ಅಲ್ಲದೆ ಸಿನಿರಂಗದಲ್ಲಿ ಹೀರೋಯಿನ್ ಗಳನ್ನೂ ಕೇವಲ ಗ್ಲಾಮರ್ ಬೊಂಬೆಗಳಾಗಿ ತೋರಿಸುತ್ತಿದ್ದಾರೆ. ಅವರ ಪಾತ್ರಕ್ಕೆ ಬೆಲೆ ಇಲ್ಲ. ಟಾಲಿವುಡ್, ಕಾಲಿವುಡ್ ಸಿನಿಮಾ ರಂಗದಲ್ಲಿ ಹೀರೋಯಿನ್ ಗೆ ಯಾವುದೇ ರೀತಿಯಲ್ಲೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ ಈ ನಟಿ. ಕೇವಲ ಬಿಚ್ಚಮ್ಮನಾಗಲು ಮಾತ್ರ ಆಕೆಯನ್ನು ಮಿತಿಗೊಳಿಸಿದ್ದಾರೆ. ಎಲ್ಲಾ ಕಡೆ ಹೀರೋಗಳದ್ದೇ ಅಧಿಪತ್ಯ ಎಂದು ಈ ಸಮಯದಲ್ಲಿ ಹೇಳಿದ್ದಾರೆ ನಿತ್ಯ. ಇದೇ ರೀತಿ ರಾಧಿಕ ಆಪ್ಟೆ ಸಹ ಹೇಳಿದ್ದರು ಇತ್ತೀಚೆಗಷ್ಟೇ!
 
ಟಾಲಿವುಡ್ ನಲ್ಲಿ ಹೀರೋಯಿನ್ ಗಳನ್ನು ಎರಡು ಹಾಡುಗಳಿಗಾಗಿ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಕೇವಲ ಆಕೆ ಹೊಳೆಯುವ ಬೊಂಬೆ ಎಂದು ಹೇಳಿದ್ದಲ್ಲದೆ, ತಾನು ಎಂದಿಗೂ ಇಂತಹ ಪಾತ್ರಗಳು ಬಂದರೆ ಒಪ್ಪಿಕೊಳ್ಳುವುದಿಲ್ಲ ಎಂದು ಈ ಸಮಯದಲ್ಲಿ ಹೇಳಿದ್ದಾರೆ. ಒಟ್ಟಾರೆ ಮಲೆಯಾಳಿ ಭಾಮೆ ಏನಾದರೊಂದು ವಿವಾದದ ಮೂಲಕ ಎಲ್ಲರ ಗಮನಕ್ಕೆ ಬರುತ್ತಿರುತ್ತಾರೆ. 

ವೆಬ್ದುನಿಯಾವನ್ನು ಓದಿ