ಆರಂಭಿಕ ಹಂತದದಲ್ಲಿ ಗೋವ ಚೆಲುವೆ ಇಲಿಯಾನ ತನ್ನ ತಾರ ಬದುಕನ್ನು ಶುರು ಮಾಡಿದ್ದು ತೆಲುಗು ಚಿತ್ರಗಳ ಮೂಲಕ. ಆಕೆಯ ರೂಪ, ಅಭಿನಯವನ್ನು ಗಣನೆಗೆ ತೆಗೆದುಕೊಂಡ ಚಿತ್ರರಂಗ ಇಲಿಯಾನಗೆ ಸಾಕಷ್ಟು ಅವಕಾಶಗಳನ್ನು ನೀಡಿತು. ಈ ಗೋವ ಚೆಲುವೆ ಆ ಬಳಿಕ ತನ್ನ ಗಮನವನ್ನು ಕೇಂದ್ರೀಕರಿಸಿದ್ದು ಬಾಲಿವುಡ್ ಕಡೆಗೆ. ಅಂತಿಮವಾಗಿ ಆಕೆಯ ಕನಸಿನಂತೆ ಈಗ ಅಲ್ಲಿಯೂ ಸಹ ಸಮಾಧಾನ ಆಗುವ ಯಶಸ್ಸು ಕಾಣುತ್ತಿದ್ದಾಳೆ.
ಇತ್ತೀಚಿಗೆ ಆಕೆ ಪ್ರಸಿದ್ಧ ದಿನ ಪತ್ರಿಕೆಯಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ತನ್ನ ವಯಕ್ತಿಕ ಸಂಗತಿಗಳನ್ನು ಹೇಳಿದ್ದಳು. ಮದುವೆಯಲ್ಲಿ ಉಂಗುರಗಳನ್ನು ಬದಲಾವಣೆ ಮಾಡಿಕೊಂಡು ಪ್ರಮಾಣ ಮಾಡಿದ ಮಾತ್ರಕ್ಕೆ ಮದುವೆ ಆಯ್ತು ಎಂದು ಹೇಳುವುದು ಸರಿಯಲ್ಲ. ಕೇವಲ ಹೇಯ್ ಯು ಆರ್ ಮ್ಯಾರಿಡ್ ಎಂದು ವಿಶ್ವ ಗುರುತಿಸುವಂತೆ ಈಗ ಮದುವೆಗಳು ಷೋ ಬ್ಯುಸಿನೆಸ್ ನಂತೆ ಬದಲಾಗಿದೆ. ಎಂದು ತನ್ನ ಮನದ ಭಾವನೆ ಬಿಚ್ಚಿಟ್ಟಿದ್ದಾಳೆ ಚೆಲುವೆ.
ಅದೇರೀತಿ ಆಕೆ ತನ್ನ ಬಾಯ್ ಫ್ರೆಂಡ್ ಆಂಡ್ರೂ ಬಗ್ಗೆ ಮಾತನಾಡುತ್ತ, ಈಗ ಆತ ನನ್ನ ಸ್ನೇಹಿತ ಅಷ್ಟೇ.ಮದುವೆ ಆಗುವವರೆಗೂ ತಾನು ಸಿಂಗಲ್ ಎಂದೇ ಹೇಳುವುದು. ಪ್ರೀತಿ, ಮದುವೆಯಂತಹ ವಿಷಯಗಳಿಗೆ ನನಗೆ ಇಲ್ಲದ ಚಿಂತೆ ಮೀಡಿಯಾಗಳಿಗೆ ಯಾಕೆ ? ಎನ್ನುವ ಪ್ರಶ್ನೆ ಎಸೆದಿದ್ದಾಳೆ ಈ ಚೆಲುವೆ. ಈಗ ತಾನು ತಾನು ಟಾಲಿವುಡ್ ನಿಂದ ದೂರ ಇದ್ದರು ಒಳ್ಳೆಯ ಕಥೆ ಹೇಳಿದರೆ ಖಂಡಿತ ನಟಿಸುವುದಾಗಿ ಹೇಳಿದ್ದಾಳೆ ಆ ತಾರೆ.