ಕೊರೋನಾ ಹಾಡಿನಲ್ಲಿ ಸುದೀಪ್, ಯಶ್ ಇಲ್ಲ ಯಾಕೆ? ಅಭಿಮಾನಿಗಳು ಗರಂ

ಭಾನುವಾರ, 24 ಮೇ 2020 (09:22 IST)
ಬೆಂಗಳೂರು: ಕೊರೋನಾ ವಿರುದ್ಧ ಹೋರಾಡಲು ಸ್ಪೂರ್ತಿ ತುಂಬುವ ಹಾಡು ‘ಬದಲಾಗು ನೀನು, ಬದಲಾಯಿಸು ನೀನು’ ನಾಳೆ ಬಿಡುಗಡೆಯಾಗಲಿದೆ.


ಈ ಹಾಡಿನಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಕನ್ನಡದ ಎಲ್ಲಾ ಘಟಾನುಘಟಿ ಸೆಲೆಬ್ರಿಟಿಗಳೂ ಇದ್ದಾರೆ. ಆದರೆ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮಾತ್ರವಿಲ್ಲ.

ಇದೇ ಕಾರಣಕ್ಕೆ ಸುದೀಪ್, ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಸೆಲೆಬ್ರಿಟಿಗಳನ್ನು ಸೇರಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಈ ಹಾಡನ್ನು ನಾವು ನೋಡಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಾಡಿನ ಪರಿಕಲ್ಪನೆ ಪವನ್ ಒಡೆಯರ್ ಅವರದ್ದು. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ