ಕ್ರೀಡಾಳುಗಳಿಗೆ ಬೇಸರ ತರುವ ಸುದ್ದಿ ಕೊಟ್ಟ ಕ್ರೀಡಾ ಸಚಿವ ಕಿರಣ್ ರಿಜಿಜು

ಭಾನುವಾರ, 24 ಮೇ 2020 (09:20 IST)
ನವದೆಹಲಿ: ಈ ಬಾರಿ ಲಾಕ್ ಡೌನ್ ಮುಗಿದ ಮೇಲಾದರೂ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದ ಕ್ರೀಡಾಳುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಬೇಸರದ ಸುದ್ದಿ ನೀಡಿದ್ದಾರೆ.


ಸದ್ಯಕ್ಕಂತೂ ಯಾವುದೇ ಕ್ರೀಡೆಗಳೂ ಪ್ರೇಕ್ಷಕರ ಹಾಜರಾತಿಯಲ್ಲಿ ನಡೆಯದು ಎಂದು ಸಚಿವರು ಹೇಳಿದ್ದಾರೆ. ಪ್ರಸಕ್ತ ಖಾಲಿ ಮೈದಾನದಲ್ಲಿ ಪಂದ್ಯ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದೇ ರೀತಿ ಮುಂದಿನ ಕೆಲವು ದಿನಗಳವರೆಗೂ ಮುಂದುವರಿಯಲಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಒಂದೆಡೆ ಬಿಸಿಸಿಐ ಐಪಿಎಲ್ ನಡೆಸಲು ತಯಾರಿ ನಡೆಸಿರುವ ಬೆನ್ನಲ್ಲೇ ಕ್ರೀಡಾ ಸಚಿವರ ಈ ಹೇಳಿಕೆ ಮಹತ್ವ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ