ಮತ್ತೆ ಜೊತೆಯಾದ ಸ್ಟೈಲಿಶ್ ನಿರ್ದೇಶಕ ಉಗ್ರಂ ನೀಲ್ ಮತ್ತು ಶ್ರೀ ಮುರಳಿ

ಶನಿವಾರ, 20 ಡಿಸೆಂಬರ್ 2014 (15:20 IST)
ಕನ್ನಡ ಚಿತ್ರರಂಗದಲ್ಲಿ  ಬಹು ಭರವಸೆಯ ನಟನಾಗಿ ಎಂಟ್ರಿ ಆದರು ಶ್ರೀ ಮುರಳಿ. ಆದರೆ ಅವರ ಯಶಸ್ಸು ಹೇಳಿಕೊಳ್ಳುವಷ್ಟು ಇರದ ಕಾರಣ ಸಾಮಾನ್ಯ ನಟರ ಸಾಲಿಗೆ ಸೇರ್ಪಡೆ ಆದರು. ಅವರ ತಾರ ಬದುಕಿಗೆ ಹೊಸ ತಿರುವು ನೀಡಿದ್ದು ಸ್ಟೈಲಿಶ್ ನಿರ್ದೇಶಕ  ಪ್ರಶಾಂತ್ ನೀಲ್ ಅವರ ನಿರ್ದೇಶನದ ಚಿತ್ರ ಉಗ್ರಂ. 
ಅನೇಕ ಭಿನ್ನತೆಗಳನ್ನು ಒಳಗೊಂಡ ಉಗ್ರಂ ಪ್ರೇಕ್ಷಕರ ಮನ ಸೆಳೆಯಿತು. ಈಗ ರಥಾವರ ಚಿತ್ರದಲ್ಲಿ ರಚಿತರಾಂ ಅವರ ಜೊತೆ ನಟಿಸುತ್ತಿದ್ದಾರೆ ಮುರಳಿ. ರಥಾವರ ನಡೆಸುತ್ತಿದ್ದಾರೆ ಚಂದ್ರಶೇಖರ್ ಬಂಡಿಯಪ್ಪ. ಉಗ್ರಂ ಶ್ರೀ ಮುರಳಿಗೆ ಅಪಾರವಾದ ಅವಕಾಶಗಳನ್ನು ನೀಡಿದೆ. 
 
ಪ್ರಸ್ತುತ ಶ್ರೀ ಮುರಳಿ ಅವರ ತಾರ ಬದುಕಿಗೆ ತಿರುವು ನೀಡಿದ ನಿರ್ದೇಶಕ ನೀಲ್ ಅವರು ಈಗ ಮತ್ತೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅದನ್ನು 6-5=2 ಹಾರರ್ ಥ್ರಿಲ್ ಚಿತ್ರವನ್ನು ನಿರ್ಮಿಸಿದ್ದ ಸ್ವತಂತ್ರಾಲಯ ಪ್ರೊಡಕ್ಷನ್ ಮತ್ತು ಕೃಷ್ಣ ಚೈತನ್ಯ ನಿರ್ಮಿಸುತ್ತಿದ್ದು ಉಗ್ರಂ ವೀರಮ್ ಹೆಸರಿನಲ್ಲಿ ಸೆಟ್ಟೇರುತ್ತಿದೆ. 

ವೆಬ್ದುನಿಯಾವನ್ನು ಓದಿ