ಕಟ್ಟಪ್ಪ ಸತ್ಯರಾಜ್ ಮುಂದಿನ ಚಿತ್ರ ಪಂದೆಮ್ ಕೋಡಿ

ಮಂಗಳವಾರ, 28 ಜುಲೈ 2015 (10:31 IST)
ದಕ್ಷಿಣ ಭಾರತದ ಅಪರೂಪದ ಖಳನಾಯಕ ಸತ್ಯರಾಜ್. ಪ್ರಸ್ತುತ ಬಾಹುಬಲಿಯಲ್ಲಿ ಕಟ್ಟಪ್ಪನ ಪಾತ್ರದಲ್ಲಿ ಎಲ್ಲರ ಮನ ಗೆದ್ದಿರುವ ಕಲಾವಿದ.ಸತ್ಯರಾಜ್  ಅವರು ಅನೇಕ ವಿಭಿನ್ನತೆಯಿಂದ ಕೂಡಿದ ಪಾತ್ರಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಈಗ ಅವರು ಪಂದೆಮ್  ಕೋಡಿ ಚಿತ್ರದ ಸೀಕ್ವಲ್ ನಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದಲ್ಲೂ ಸಹಿತ  ವಿಲನ್ ಆಗಿ ಜನರ ಮುಂದೆ ಬರಲಿದ್ದಾರೆ ಕಟ್ಟಪ್ಪ. 
ಲಿಂಗುಸ್ವಾಮಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಮೊದಲು ಅಕ್ಷರ ಹಾಸನ್  ಅವರು ನಟಿಸುತ್ತಾರೆ ಎನ್ನುವ ಸಂಗತಿ ಕಾಲಿವುಡ್ ಮಂದಿಯಿಂದ ಕೇಳಿ ಬಂದಿತ್ತು. ಆದರೆ ಆಕೆಯ ಕಡೆಯಿಂದ ಯಾವುದೇ ಸುದ್ದಿ ಹೊರ ಬಂದಿಲ್ಲ. ಈ ಮೊದಲು ಶಾಮಿಲಿ ಅವರು ಈ ಚಿತ್ರದ ಹೀರೋಯಿನ್ ಆಗುತ್ತಾರೆ ಎಂದು  ವದಂತಿ ಹರಡಿತ್ತು. ಆದರೆ ಅವೆಲ್ಲ ಸುಳ್ಳು ಸುದ್ದಿ ಎಂದು ಚಿತ್ರತಂಡದವರು ಹೇಳಿದ್ದಾರೆ. ಈಗ ಬಂದಿರುವ ಸುದ್ದಿ ಅನ್ವಯ ಮೀರಾ ಜಾಸ್ಮಿನ್  ಮೊದಲ ಭಾಗದಲ್ಲಿ  ಹೀರೋಯಿನ್ ಆಗಿದ್ದರು, ಈಚಿತ್ರದಲ್ಲಿ ಅವರು ಮುಖ್ಯಪಾತ್ರಧಾರಿಯಾಗಲಿದ್ದಾರಂತೆ. 
 

ವೆಬ್ದುನಿಯಾವನ್ನು ಓದಿ