ಆಸ್ಪತ್ರೆ ನೆಪದಲ್ಲಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ಪವಿತ್ರಾ ಗೌಡ ಮಾಡಿದ್ದೇನು

Krishnaveni K

ಸೋಮವಾರ, 1 ಜುಲೈ 2024 (16:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಅವರ ಆಪ್ತ ಗೆಳತಿ ಪವಿತ್ರಾ ಗೌಡ ಈಗ ಜೈಲಿನಲ್ಲಿ ಪರಸ್ಪರ ಭೇಟಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮರ್ಡರ್ ಕೇಸ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದೆ. ಆದರೆ ಆರೋಪಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ದರ್ಶನ್ ಮತ್ತು ನಾಲ್ವರು ಆರೋಪಿಗಳು ಒಂದು ಕಡೆಯಾದರೆ ಪವಿತ್ರಾ ಗೌಡರನ್ನು ಮಹಿಳಾ ಬಾರಕ್ ನಲ್ಲಿರಿಸಲಾಗಿದೆ.

ಹೀಗಾಗಿ ಎಲ್ಲಾ ಆರೋಪಿಗಳಿಗೂ ಪರಸ್ಪರ ಭೇಟಿಗೆ ಅವಕಾಶವಿಲ್ಲ. ಹಾಗಿದ್ದರೂ ಇದೀಗ ಆರೋಪಿಗಳು ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ಪರಸ್ಪರ ಭೇಟಿಯಾಗುತ್ತಿದ್ದಾರಂತೆ. ದರ್ಶನ್ ಇರುವ ಬಾರಕ್ ಪಕ್ಕದಲ್ಲೇ ಜೈಲಿನ ಆಸ್ಪತ್ರೆಯಿದೆ. ಇಲ್ಲಿಗೆ ಭೇಟಿ ನೀಡುವ ನೆಪದಲ್ಲಿ ಸಹ ಆರೋಪಿಗಳು ದರ್ಶನ್ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅದರಲ್ಲೂ ಪವಿತ್ರಾ ಗೌಡ ಆಸ್ಪತ್ರೆ ನೆಪದಲ್ಲಿ ದರ್ಶನ್ ರನ್ನು ಭೇಟಿ ಮಾಡಿ ತಮ್ಮ ಸ್ಥಿತಿಗೆ ಕಣ್ಣೀರು ಹಾಕಿದ್ದಾರಂತೆ. ಈ ವೇಳೆ ದರ್ಶನ್ ಏನೂ ಆಗಲ್ಲ ಎಂದು ಪವಿತ್ರಾಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇಂದು ದರ್ಶನ್ ರನ್ನು ಅವರ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಮತ್ತು ಪುತ್ರ ವಿನೀಶ್ ಭೇಟಿ ಮಾಡಿ ಸಾಂತ್ವನ ಹೇಳಿ ವಾಪಸಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ