ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ ರನ್ನ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಅದರಲ್ಲೇನು ವಿಶೇಷ ? ಒಂದು ಚಿತ್ರ ಆರಂಭವಾದ ಬಳಿಕ ಶೂಟಿಂಗ್ ಮುಂದುವರೆಯುವುದು ಸಹಜ ಅಲ್ವ ಎನ್ನುವ ಪ್ರಶ್ನೆ ನಿಮ್ಮಿಂದ ಬರುತ್ತದೆ ಎನ್ನುವುದನ್ನು ನಾವು ಬಲ್ಲೆವು. ಆದರೆ ಈಗ ಹೇಳುತ್ತಿರುವ ಸಂಗತಿ ಅದಲ್ಲ. ಈ ಚಿತ್ರದ ಶೂಟಿಂಗ್ ಹೊರೆತು ಪಡಿಸಿ ಸುದೀಪ್ ಬೇರೆ ಭಾಷೆಗಳಲ್ಲೂ ಸಹಿತ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಸುದೀಪ್.
ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಪ್ರಣಯ ದೃಶ್ಯಗಳು ಅಲ್ಲದೆ ಕಿಚ್ಚ ಸುದೀಪ್ ಅವರು ಈಗ ಕಷ್ಟಕರ ರೋಮಾಂಚನ ಉಂಟು ಮಾಡುವಂತಹ ಸಾಹಸ ದೃಶ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಪ್ರಸಿದ್ಧ ಸಾಹಸ ನಿರ್ದೇಶಕ ಪೀಟರ್ ಹೈನ್ಸ್ ನಿರ್ದೇಶಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಪೀಟರ್, ಕನ್ನಡದ ಸತ್ಯ ಇನ್ ಲವ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದರು. ತೆಲುಗು ಚಿತ್ರ ಬಾಹುಬಲಿ ಚಿತ್ರೀಕರಣದ ಸಮಯದಲ್ಲಿ ಸುದೀಪ್ ಪೀಟರ್ ಅವರನ್ನು ಭೆಟ್ಟಿಯಾದಾಗ ತಮ್ಮ ಚಿತ್ರದ ಸಾಹಸ ದ್ರಶ್ಯ ನಿರ್ದೇಶನ ಮಾಡಲು ಆಹ್ವಾನ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟ ಪೀಟರ್ ಕನ್ನಡ ಚಿತ್ರದಲ್ಲಿ ಸಾಹಸ ನಿರ್ದೇಶನ ಮಾಡಲು ಮುಂದಾಗಿದ್ದಾರೆ.