'ರಾವಣಿ'ಯಾಗಲಿರುವ ಮಳೆ ಹುಡುಗಿ ಪೂಜಾ

ಶುಕ್ರವಾರ, 22 ಮೇ 2015 (10:16 IST)
ಲಕ್ಕಿ ಶಂಕರ್ ತಮ್ಮ ಮುಂದಿನ ಚಿತ್ರಕ್ಕೆ ಪೂಜಾಗಂಧಿಯನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನಾವು ಈ ಮೊದಲು ಬರೆದಿದ್ದೆವು. ಆ ಚಿತ್ರದ ಜೊತೆಗೆ ಪೂಜಾಗಾಂಧಿ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದರ ಹೆಸರು ರಾವಣಿ. ರಾವಣಿ ಚಿತ್ರವನ್ನು  ಚಂದ್ರಚೂಡ ನಿರ್ದೇಶನ ಮಾಡುತ್ತಿದ್ದಾರೆ.  ಪತ್ರಕರ್ತ, ಕವಿ ಇನ್ನು ಹಲವಾರು ರೀತಿಯಿಂದ ಜನರಿಗೆ ಗೊತ್ತಾಗಿರುವ ಚಂದ್ರಚೂಡ್ ನಟಿ ಶ್ರುತಿ ಜೊತೆ ಮದುವೆ ಆಗಿ ಸಹಿತ ಜನರ ಗಮನಕ್ಕೆ ಬಂದಿದ್ದರು. ಈಗ ಅವೆಲ್ಲವೂ ತಣ್ಣಗಾಗಿದೆ.ರಾವಣಿಯ ನಿರ್ದೇಶನದ ಸಂಗತಿಯಷ್ಟೇ ಬಿಸಿಯಾಗಿರುವುದು. 
ಪೂಜಾಗಾಂಧಿ ಅಭಿನೇತ್ರಿ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಆದರೆ ಆ ಚಿತ್ರ ವಿವಾದಗಳಿಂದ ಪಡೆದಷ್ಟು ಹೆಸರನ್ನು ಬಿಡುಗಡೆ ಆದ ನಂತರ ಪಡೆಯಲಿಲ್ಲ. ಈಗ ಆಕೆ ನಟಿ ಕಲ್ಪನಾ ಜೀವನಾಧಾರಿತ ಚಿತ್ರ ನಿರ್ಮಿಸಿದ್ದರು. ಆದರೆ ಈಗ ನಟಿಸುತ್ತಿರುವ ರಾವಣಿ ಚಿತ್ರ ಭಿನ್ನ ಕಥೆಯನ್ನು ಹೊಂದಿದೆ. ಇದರಲ್ಲಿ ಹೆಣ್ಣುಮಗಳೊಬ್ಬಳು ತನ್ನ ಶತ್ರುಗಳ ಮೇಲೆ ಭಿನ್ನ ರೀತಿಯಲ್ಲಿ ಹೇಗೆ ಹಗೆ ಸಾಧಿಸುತ್ತಾಳೆ ಎನ್ನುವ ಅಂಶಕ್ಕೆ ಮಾನ್ಯತೆ ನೀಡಲಾಗಿದೆಯಂತೆ . 
 
ಈ ಚಿತ್ರದ ಮೊದಲ ಹಂತದ ನಿರ್ಮಾಣ ಕಾರ್ಯಗಳು ನಡೆದಿದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಕೆಲಸ ಆರಂಭವಾಗಲಿದೆಯಂತೆ. ಪೂಜಾ ಆ ಚಿತ್ರದ ಕಲಾವಿದರ ಆಯ್ಕೆ ಮಾಡುತ್ತಿದ್ದಾರೆ. ಜೊತೆಗೆ ತಾಂತ್ರಿಕವರ್ಗದವರನ್ನು ಸಹಿತ ಆಯ್ಕೆ ಮಾಡುವತ್ತ ತಮ್ಮ ಗಮನ ನೆಟ್ಟಿದ್ದಾರೆ. ಪೂಜಾ ಇದರಲ್ಲಿ ಸಾಹಸ ಪ್ರಧಾನ ಪಾತ್ರದಲ್ಲಿ ಆಕೆಯ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಬಗ್ಗೆ ತರಬೇತಿಯನ್ನು ಮುಂದಿನವಾರದಿಂದ ಪಡೆಯಲಿದ್ದಾರಂತೆ. ಶೂಟಿಂಗ್ ಗೆ ಮುನ್ನ ವರ್ಕ್ ಶಾಪ್ ಮಾಡಿಸುವ ಉದ್ದೇಶ ಸಹಿತ ಪೂಜಾಗಿದ್ದು, ಎಲ್ಲಾ ಕಲಾವಿದರೂ ದೊರೆತ ಬಳಿಕ ತರಬೇತಿ ನೀಡಲಾಗುವುದಂತೆ. 

ವೆಬ್ದುನಿಯಾವನ್ನು ಓದಿ