ಪ್ರಕಾಶ್ ರಾಜ್ ಅವರು ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಆಗಡು ಚಿತ್ರದಿಂದ ಕಿಕ್ ಔಟ್ ಆದ ಕಥೆ ಬಗ್ಗೆ ಈ ಮೊದಲು ನಾವು ತಿಳಿಸಿದ್ದೆವು, ಈಗ ಬಂದ ಮಾಹಿತಿ ಪ್ರಕಾರ ಪ್ರಕಾಶ್ ರಾಜ್ ಅವರ ಈ ಉಪಟಳಕ್ಕೆ ಸರಿಯಾದ ಬುದ್ಧಿ ಕಲಿಸ ಬೇಕು ಎಂದು ಟಾಲಿವುಡ್ ನಿರ್ದೇಶಕರ ಸಂಘ ನಿರ್ಧರಿಸಿದೆ. ಇದನ್ನು ಟಾಲಿವುಡ್ ಡೈರೆಕ್ಟರ್ಸ್ ಅಸೋಸಿಯೇಷನ್ ತುಂಬಾ ಗಂಭೀರವಾಗಿ ಪರಿಗಣಿಸಿ ಪ್ರಕಾಶ್ ರಾಜ್ ಅವರಿಗೆ ಸೂಕ್ತ ರೀತಿಯಲ್ಲಿ ಬುದ್ಧಿ ಕಲಿಸ ಬೇಕು ಎಂದು ನಿರ್ಣಯ ತೆಗೆದುಕೊಂಡಿದೆ. ಅದರ ಫಲವಾಗಿ ಹೀಗೆ ತೊಂದರೆ ಕೊಟ್ಟ ಪ್ರಕಾಶ್ ರಾಜ್ ಗೆ 75 ಲಕ್ಷ ದಂಡ ಹಾಕಿದೆ.
ಈ ವಿಷಯದಲ್ಲಿ ಪ್ರಕಾಶ್ ರಾಜ್ ಸಹಕರಿಸದೆ ಹೋದಲ್ಲಿ ಆತ ತೆಲುಗು ಚಿತ್ರಗಳಲ್ಲಿ ನಟಿಸದೆ ಇರುವಂತೆ ಬ್ಯಾನ್ ಮಾಡುವ ಬಗ್ಗೆಯೂ ಸಹ ಗಂಭೀರವಾಗಿ ಚಿಂತನೆ ನಡಿಸಿದ್ದಾರೆ. ಪ್ರತಿದಿನ ಆಗಡು ಶೂಟಿಂಗ್ ಗೆ ನಿಧಾನವಾಗಿ ಬರುವುದಲ್ಲದೆ, ಅಸಿಸ್ಟೆಂಟ್ ಡೈರೆಕ್ಟರ್ಸ್ ಜೊತೆ ಕೆಟ್ಟದಾಗಿ ಮಾತನಾಡುತ್ತಿದ್ದ ಬಗ್ಗೆ ತೀವ್ರವಾಗಿ ತೆಗೆದು ಕೊಂಡು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ನಿರ್ದೇಶಕರ ಸಂಘದವರು . ವಿಷಯದ ತೀವ್ರತೆ ಅರಿವಾಗಿ ಈಗ ತನ್ನ ಆತ್ಮೀಯ ನಿರ್ದೇಶಕ ದಿಲ್ರಾಜ ಅವರ ಮುಖಾಂತರ ಚರ್ಚೆಗೆ ಸಿದ್ಧ ಆಗಿದ್ದಾರೆ ಪ್ರಕಾಶ್ ರಾಜ್ ಅನ್ನುವುದು ಸದ್ಯದ ಸುದ್ದಿ..ಆದರೆ ಇಷ್ಟೆಲ್ಲಾ ಗಲಾಟೆಗಳು ನಡೆಯುತ್ತಿದ್ದರು ಈ ಚಿತ್ರದ ನಾಯಕ ಮಹೇಶ್ ಸೈಲೆಂಟಾಗಿ ಇದ್ದಾರೆ.. ಯಾಕೋ ?