ಭಾರತೀಯ ಚಿತ್ರರಂಗದ ಭಿನ್ನ ಕಲಾವಿದ ಪ್ರಕಾಶ್ ರಾಜ್. ಅನೇಕ ರೀತಿಯ ವಿವಾದಗಳ ಸುಳಿಯಲ್ಲಿ ತಾನು ಸಿಲುಕಿದರೂ ಸಹಿತ ಯಾವುದೇ ರೀತಿಯಲ್ಲೂ ಅದಕ್ಕೆ ಹೆದರದ ಅಭಿಜಾತ ಪ್ರತಿಭೆ ಪ್ರಕಾಶ್ ರಾಜ್. ಈಗ ಹೈದಾರಾಬಾದ್ ನಲ್ಲಿ ಅವರು ನೆಲೆಸಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈಗ ಅಲ್ಲಿ ಸಿಕ್ಕಾಪಟ್ಟೆ ಚಳಿ ಇರುವುದರಿಂದ ಪ್ರಕಾಶ್ ರಾಜ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದನ್ನು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ತಮಗೆ ಫ್ಲೂ ಜ್ವರ ಇರುವ ಕಾರಣ ತಾವು ಹೈದರಾಬಾದ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಮಣಿರತ್ನಂ ಅವರ ಹೊಸ ಪ್ರಾಜಕ್ಟ್ ಓಕೆ ಬಂಗಾರಂ, ರುದ್ರಮದೇವಿ ಚಿತ್ರಗಳ ಮೂಲಕ ಮತ್ತೆ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಫಾರ್ಮ್ ಹೆಚ್ಚಿಸಿಕೊಂಡಿದ್ದಾರೆ. ಅದರ ನಡುವೆ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಚಿತ್ರಕ್ಕೂ ಸಹಿತ ಆಯ್ಕೆಯಾಗಿದ್ದಾರೆ. ಒಂದು ಕಡೆ ಟಾಪ್ ಹೀರೋಗಳ ಚಿತ್ರಗಳಲ್ಲಿ ಮುಖ್ಯ ಪೋಷಕ ನಟನಾಗಿ ನಟಿಸುತ್ತಾ ಮತ್ತೊಂದು ಕಡೆ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ ಪ್ರಕಾಶ್ ರಾಜ್. ಈ ಮೂಲಕ ತಾನೆಷ್ಟು ರಂಗಭೂಮಿ ಪ್ರಿಯ ಎನ್ನುವುದು ಇದರಿಂದ ತಿಳಿಯುತ್ತದೆ.