ತ್ರಿವಿಕ್ರಂ ಕೋಪಕ್ಕೆ ತುತ್ತಾದ ಪ್ರಣೀತ ..ಅವಕಾಶ ಪಡೆದ ನಿತ್ಯ

ಶುಕ್ರವಾರ, 31 ಅಕ್ಟೋಬರ್ 2014 (13:08 IST)
ನಿನ್ನೆ ಒಂದು ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಿಂದ ಟಾಲಿವುಡ್ ಪ್ರಣೀತಳತ್ತ   ನೋಡುವಂತೆ ಆಗಿದೆ. ಈ  ಚಿತ್ರನಟಿಯ ಬಗ್ಗೆ ನಿರ್ದೇಶಕ ತ್ರಿವಿಕ್ರಂ ಅವರು ಅಪಮಾನ ಮಾಡಿದ್ದು ಮಾತ್ರ ಎಲ್ಲರಿಗು ಹೊಸ ಸುದ್ದಿ ಸಿಕ್ಕಂತೆ ಆಗಿದೆ 
 
ಮಾತನಾಡಲು. ಕನ್ನಡದ ಹುಡುಗಿ ಪ್ರಣೀತ ತೆಲುಗು ಚಿತ್ರರಂಗದಲ್ಲೂ ಸಹಿತ ತನ್ನ  ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಆಕೆಯ ನಟನೆಯ ರಭಸದ ಚಿತ್ರ ಇತ್ತೀಚಿಗೆ ಮಕಾಡೆ ಮಲಗಿದ್ದರೂ ಸಹ ಡಿಮ್ಯಾಂಡ್ ಕಡಿಮೆ ಮಾಡಿಕೊಳ್ಳದ ಈ ಚೆಲುವೆ ತ್ರಿವಿಕ್ರಂ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾಳೆ ಎನ್ನುವ ಸುದ್ದಿ ಇತ್ತು. ಆಕೆ ಅವರ ನಿರ್ದೇಶನದ ಚಿತ್ರದಲ್ಲಿ ಕೆಲವು ದಿನಗಳ ಕಾಲ ಭಾಗವಹಿಸಿಯೂ ಇದ್ದಳು. 
 
ಆ ಚಿತ್ರದ ದೃಶ್ಯ ಒಂದರಲ್ಲಿ ಪ್ರಣೀತ ಯಾವ ರೀತಿ ಕಾಣಬೇಕು, ಹೇಗೆ ಡ್ರಸ್ ಮಾಡಿಕೊಳ್ಳಬೇಕು ಎಂದು ತ್ರಿವಿಕ್ರಂ ಅವರು ಮೊದಲೇ ತಿಳಿಸಿದ್ದರೂ ಸಹಿತ ಈ ಹುಡುಗಿ ನಿರ್ದೇಶಕರ ಮಾತಿಗೆ ಕ್ಯಾರೆ ಅನ್ನದೆ ತನಗೆ ಹೇಗೆ ಬೇಕೋ ಹಾಗೆ ಬಂದಳಂತೆ. ಇದರಿಂದ  ರೊಚ್ಚಿಗೆದ್ದ ತ್ರಿವಿಕ್ರಂ ಯೂನಿಟ್ ಸದಸ್ಯರ ಮುಂದೆ ಪ್ರಣೀತ ಳನ್ನು ಹಿಗ್ಗಾಮಗ್ಗ ಬೈದು ರೇಗಾಡಿದರಂತೆ ಆ ರೀತಿ ವರದಿ ಮಾಡಲಾಗಿದೆ.ಆಗ ಸಿಟ್ಟಿಗೆದ್ದ ಪ್ರಣೀತ ಆ ಸ್ಪಾಟ್ ನಿಂದ ಹೊರ ಬಂದಾಗ ಇದರಿಂದ ಮತ್ತಷ್ಟು ಕೋಪಗೊಂಡ ತ್ರಿವಿಕ್ರಮ ಆಕೆ ಜಾಗದಲ್ಲಿ ನಿತ್ಯ ಮೆನನ್ ಅವರಿಗೆ ಅವಕಾಶ ನೀಡಿದರಂತೆ. ಹಾಗಂತ ಪತ್ರಿಕೆಯಲ್ಲಿ ಸುದ್ದಿ ಹರಡಿದೆ. 
 
ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಆಕೆಗೆ ಅವಕಾಶ ನೀಡಿ ತಾರ ಬದುಕಲ್ಲಿ ತಿರುವು ನೀಡಿದ ನಿರ್ದೇಶಕರ ಬಳಿ ಹಿಂಗ್ಯಾಕೆ ಮಾಡಿದಳು ಈಕೆ ಎನ್ನುವುದೇ ಈಗ ಟಾಲಿವುಡ್ ಚಿತ್ರರಂಗದದಲ್ಲಿ  ಚಿಂತೆ ಉಂಟು ಮಾಡಿರುವ ದೊಡ್ಡ ಸಂಗತಿಯಾಗಿದೆ. 
 

ವೆಬ್ದುನಿಯಾವನ್ನು ಓದಿ