ಮಾತನಾಡಲು. ಕನ್ನಡದ ಹುಡುಗಿ ಪ್ರಣೀತ ತೆಲುಗು ಚಿತ್ರರಂಗದಲ್ಲೂ ಸಹಿತ ತನ್ನ ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಆಕೆಯ ನಟನೆಯ ರಭಸದ ಚಿತ್ರ ಇತ್ತೀಚಿಗೆ ಮಕಾಡೆ ಮಲಗಿದ್ದರೂ ಸಹ ಡಿಮ್ಯಾಂಡ್ ಕಡಿಮೆ ಮಾಡಿಕೊಳ್ಳದ ಈ ಚೆಲುವೆ ತ್ರಿವಿಕ್ರಂ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾಳೆ ಎನ್ನುವ ಸುದ್ದಿ ಇತ್ತು. ಆಕೆ ಅವರ ನಿರ್ದೇಶನದ ಚಿತ್ರದಲ್ಲಿ ಕೆಲವು ದಿನಗಳ ಕಾಲ ಭಾಗವಹಿಸಿಯೂ ಇದ್ದಳು.
ಆ ಚಿತ್ರದ ದೃಶ್ಯ ಒಂದರಲ್ಲಿ ಪ್ರಣೀತ ಯಾವ ರೀತಿ ಕಾಣಬೇಕು, ಹೇಗೆ ಡ್ರಸ್ ಮಾಡಿಕೊಳ್ಳಬೇಕು ಎಂದು ತ್ರಿವಿಕ್ರಂ ಅವರು ಮೊದಲೇ ತಿಳಿಸಿದ್ದರೂ ಸಹಿತ ಈ ಹುಡುಗಿ ನಿರ್ದೇಶಕರ ಮಾತಿಗೆ ಕ್ಯಾರೆ ಅನ್ನದೆ ತನಗೆ ಹೇಗೆ ಬೇಕೋ ಹಾಗೆ ಬಂದಳಂತೆ. ಇದರಿಂದ ರೊಚ್ಚಿಗೆದ್ದ ತ್ರಿವಿಕ್ರಂ ಯೂನಿಟ್ ಸದಸ್ಯರ ಮುಂದೆ ಪ್ರಣೀತ ಳನ್ನು ಹಿಗ್ಗಾಮಗ್ಗ ಬೈದು ರೇಗಾಡಿದರಂತೆ ಆ ರೀತಿ ವರದಿ ಮಾಡಲಾಗಿದೆ.ಆಗ ಸಿಟ್ಟಿಗೆದ್ದ ಪ್ರಣೀತ ಆ ಸ್ಪಾಟ್ ನಿಂದ ಹೊರ ಬಂದಾಗ ಇದರಿಂದ ಮತ್ತಷ್ಟು ಕೋಪಗೊಂಡ ತ್ರಿವಿಕ್ರಮ ಆಕೆ ಜಾಗದಲ್ಲಿ ನಿತ್ಯ ಮೆನನ್ ಅವರಿಗೆ ಅವಕಾಶ ನೀಡಿದರಂತೆ. ಹಾಗಂತ ಪತ್ರಿಕೆಯಲ್ಲಿ ಸುದ್ದಿ ಹರಡಿದೆ.