ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ 3 ಗಂಟೆಗೆ ಮುಂದೂಡಿಕೆ

ಗುರುವಾರ, 25 ಅಕ್ಟೋಬರ್ 2018 (11:30 IST)
ಬೆಂಗಳೂರು : ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿದ ಮೀಟೂ ಆರೋಪದ ಬಗ್ಗೆಇಂದು ಬೆಳಿಗ್ಗೆ  10.30ಕ್ಕೆ  ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದ  ಅರ್ಜುನ್ ಸ್ನೇಹಿತ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿಯನ್ನು ಮುಂದೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಶೃತಿ ಹರಿಹರನ್ ಬಗ್ಗೆ ಅರ್ಜುನ್ ಸ್ನೇಹಿತ ಪ್ರಶಾಂತ್ ಸಂಬರಗಿ ಇಂದು ಬೆಳಿಗ್ಗೆ  10.30ಕ್ಕೆ  ಸುದ್ದಿಗೋಷ್ಠಿ ನಡೆಸಿ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ   ತಿಳಿಸಿದ್ದರು, ಆದರೆ ಇದೀಗ  ಸುದ್ದಿಗೋಷ್ಠಿಯನ್ನು 3 ಗಂಟೆಗೆ ಮುಂದುಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ಹಾಗೇ ಇಂದು ಸಂಜೆ ಸ್ಯಾಂಡಲ್ ವುಡ್ ಖ್ಯಾತ ಹಿರಿಯ ನಟ ಅಂಬರೀಶ್ ಅವರು ಹಿರಿಯ ನಟಿಯರಾದ ತಾರಾ, ಜಯಂತಿ, ಭಾರತಿ ಹಾಗೂ ಅಂಬಿಕ ಅವರ ಜೊತೆ ಚರ್ಚೆ ನಡೆಸಿ  ನಂತರ ನಟಿಯರ ಜೊತೆ ಮೀಟೂ ಆರೋಪದ ಬಗ್ಗೆ ಸಭೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ