ಪ್ರಶಾಂತ್ ನೀಲ್ ರನ್ನು ವೀರಪ್ಪನ್ ಎಂದ ರಾಮ್ ಗೋಪಾಲ್ ವರ್ಮಾ

ಶುಕ್ರವಾರ, 6 ಮೇ 2022 (07:50 IST)
ಮುಂಬೈ: ಕೆಜಿಎಫ್ 2 ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ನೀಲ್ ರನ್ನು ವೀರಪ್ಪನ್ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕರೆದಿದ್ದಾರೆ.

ತಮ್ಮದೇ ಶೈಲಿಯಲ್ಲಿ ಪ್ರಶಾಂತ್ ನೀಲ್ ರನ್ನು ಹೊಗಳಿರುವ ರಾಮ್ ಗೋಪಾಲ್ ವರ್ಮಾ ವೀರಪ್ಪನ್ ಆಫ್ ಇಂಡಿಯನ್ ಸಿನಿಮಾ ಎಂದಿದ್ದಾರೆ.

ಕೆಜಿಎಫ್ ಸಿನಿಮಾ ಎಂಥಾ ಯಶಸ್ಸು ಪಡೆದಿದೆಯೆಂದರೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ್ನು ಆವರಿಸಿದೆ. ಇದನ್ನು ನೋಡುತ್ತಿದ್ದರೆ ಈಗ ಬಾಲಿವುಡ್, ಟಾಲಿವುಡ್ ಎಂದೆಲ್ಲಾ ಇಲ್ಲ, ಕೇವಲ ಕೆಜಿಎಫ್ 2 ಇಂಡಸ್ಟ್ರಿ ಎನ್ನುವ ಪರಿಸ್ಥಿತಿಯಾಗಿದೆ. ಪ್ರಶಾಂತ್ ನೀಲ್ ನೀವು ವೀರಪ್ಪನ್ ಆಫ್ ಇಂಡಿಯನ್ ಸಿನಿಮಾ ಎಂದು ರಾಮ್ ಗೋಪಾಲ್ ವರ್ಮಾ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ