ಅರ್ಜುನ್ ಸರ್ಜಾ ಆಪ್ತನಿಂದ ಶೃತಿ ಹರಿಹರನ್ ಬಗ್ಗೆ ಕೆಲವೇ ಕ್ಷಣಗಳಲ್ಲಿ ಸ್ಪೋಟಕ ಮಾಹಿತಿ!

ಗುರುವಾರ, 25 ಅಕ್ಟೋಬರ್ 2018 (09:10 IST)
ಬೆಂಗಳೂರು: ಮೀ ಟೂ ಅಭಿಯಾನದ ಪರಿಣಾಮ ತಾರಕಕ್ಕೇರಿದ್ದು, ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶೃತಿ ಹರಿಹರನ್ ಬಗ್ಗೆ ಸ್ಪೋಟಕ ಮಾಹಿತಿ ನೀಡಲು ಅರ್ಜುನ್ ಸ್ನೇಹಿತ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಲಿದ್ದಾರಂತೆ.

ಇಂದು ಬೆಳಿಗ್ಗೆ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಪ್ರಶಾಂತ್ ಸಂಬರಗಿ ಶೃತಿ ಆಪ್ತ ರಾಮ್ ಎಂಬವರು ತಮಗೆ ಕರೆ ಮಾಡಿ ಸಂಧಾನ ಮೂಲಕ ಎಲ್ಲಾ ಸಮಸ್ಯೆಗಳನ್ನು ಇಲ್ಲಿಯೇ ಪರಿಹರಿಸಿಕೊಳ‍್ಳೋಣ ಎಂದಿದ್ದಾರೆ ಎಂಬ ವಿಚಾರದ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದೆ.

ಈ ಹಿಂದೆಯೂ ಹಣಕ್ಕಾಗಿ ಈ ಆರೋಪ ಮಾಡಲಾಗಿದೆ ಎಂದು ಪ್ರಶಾಂತ್ ಆರೋಪಿಸಿದ್ದರು. ಹೀಗಾಗಿ ಇಂದು ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ನೀಡಲಿರುವ ಸ್ಪೋಟಕ ಮಾಹಿತಿಯಲ್ಲಿ ಶೃತಿ ಬಗ್ಗೆ ಏನೇನು ಆರೋಪ ಮಾಡುತ್ತಾರೆ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ