ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ಕಿಡಿಕಾರಿದ ಒಳ್ಳೆ ಹುಡುಗ ಪ್ರಥಮ್

ಬುಧವಾರ, 4 ಏಪ್ರಿಲ್ 2018 (06:58 IST)
ಬೆಂಗಳೂರು : ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ರೆಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಇದು ಈಗ ಭಾರೀ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಕೂಡ ಅನೂಪ್ ಭಂಡಾರಿ ಅವರ ಮೇಲೆ ಕಿಡಿಕಾರಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಥಮ್ ಅವರು,’ರಾಜರಥ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಮುಖ್ಯ ಕಾರಣ ಅಪ್ಪು ಬಾಸ್ ವಾಯ್ಸ್. ಮಿಸ್ಟರ್ ಅನೂಪ್ ಬಂಡಾರಿ ನಿಮ್ಮ ಮೊದಲ ಸಿನಿಮಾ ಗೆಲ್ಲೋಕೆ ಮುಖ್ಯ ಕಾರಣ ಏನ್ ಗೊತ್ತಾ? ಬಾಹುಬಲಿ ಎದುರು ನಮ್ಮ ಸಿನಿಮಾ ಗೆಲ್ಲಿಸಿಕೊಳ್ಳೋಣ ಎಂಬ ಕನ್ನಡಿಗರ ವಿಶಾಲ ಮನಸ್ಸು. ನಿಜವಾಗಿಯೂ ನನಗೆ ರಂಗಿತರಂಗ ಗಿಂತ ಈ ಸಿನಿಮಾ ಕಾಮಿಡಿ ಇಷ್ಟ ಆಯ್ತು. ಎರಡನೇ ಸಲ ನೋಡೋಣ ಅಂಕೊಂಡಿದ್ದೆ. ಜನಗಳನ್ನ ಪ್ರೀತಿಯಿಂದ ಅಭಿಮಾನದಿಂದ ಗೆಲ್ಲಿ. ಈ ರೀತಿ ನೋಯಿಸಬೇಡಿ " ಎಂದು ಫೇಸ್ ಬುಕ್ ನಲ್ಲಿ ಬರೆಯುವುದರ ಮೂಲಕ ಗರಂ ಆಗಿ ವಾರ್ನಿಂಗ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ