ಅರವಿಂದ್ ಸ್ವಾಮಿಯನ್ನು ಒಲ್ಲೆ ಎಂದ ಪ್ರಿಯಾಮಣಿ

ಭಾನುವಾರ, 26 ಫೆಬ್ರವರಿ 2017 (11:09 IST)
ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ತಾರೆ ಪ್ರಿಯಾಮಣಿ. ಆಕೆ ಅಭಿನಯದ ಪರುತ್ತಿವೀರನ್ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಆದರೆ ಆ ಬಳಿಕ ಯಾಕೋ ಏನೋ ಮತ್ತೆ ತಮಿಳು ಪ್ರೇಕ್ಷಕರು ಪ್ರಿಯಾಮಣಿಯನ್ನು ಸ್ವೀಕರಿಸಲಿಲ್ಲ.
 
ಕೇವಲ ತಮಿಳಲ್ಲಷ್ಟೇ ಅಲ್ಲದೆ ತೆಲುಗು, ಕನ್ನಡದಲ್ಲೂ ಪ್ರಿಯಾಮಣಿ ತಮ್ಮ ಛಾಪು ಮೂಡಿಸಿದವರು. ಇತ್ತೀಚೆಗೆ ಮತ್ತೆ ತಮಿಳಿನಲ್ಲಿ ಅಭಿನಯಿಸುವ ಅವಕಾಶ ಪ್ರಿಯಾಮಣಿಯನ್ನು ಹುಡುಕಿಕೊಂಡು ಬಂದಿದೆ.
 
ಸೆಲ್ವ ಆಕ್ಷನ್ ಕಟ್ ಹೇಳುತ್ತಿರುವ ಅರವಿಂದ ಸ್ವಾಮಿ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಸ್ನೇಹಿತೆಯಾಗಿ ಅಭಿನಯಿಸಲು ಹೇಳಲಾಗಿತ್ತು. ಸ್ನೇಹಿತೆ ಪಾತ್ರ ಎಂದ ಕೂಡಲೆ ಪ್ರಿಯಾಮಣಿ ಪ್ರತಿಕ್ರಿಯಿಸಲಿಲ್ಲವಂತೆ. ಆ ಪಾತ್ರಕ್ಕೆ ನಿರ್ದೇಶಕರು ಈಗ ಸಿಮ್ರಾನ್‍ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ