ಕಾಲ್ ಶೀಟ್ ಕೊಡ್ತಾ ಇಲ್ಲ: ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎನ್.ಕುಮಾರ್ ಆರೋಪ

ಸೋಮವಾರ, 3 ಜುಲೈ 2023 (16:14 IST)
ಬೆಂಗಳೂರು: ಕಿಚ್ಚ ಸುದೀಪ್ ಕಿಚ್ಚ46 ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೇ ನಿರ್ಮಾಪಕ ಎನ್.ಕುಮಾರ್ ಅವರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

ಕಿಚ್ಚ ಸುದೀಪ್ ಜೊತೆ ಮಾಣಿಕ್ಯ, ಶಾಂತಿ ನಿವಾಸ, ಮೈ ಆಟೋಗ್ರಾಫ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದ ಎನ್. ಕುಮಾರ್ ಈಗ ಹೊಸ ಸಿನಿಮಾಗೆ ಮುಂಗಡ ಪಡೆದು ಕಾಲ್ ಶೀಟ್ ಕೊಡುತ್ತಿಲ್ಲ ಎಂದು ಆರೋಪ ಹೊರಿಸಿದ್ದಾರೆ.

ಈ ಮೊದಲು ಎನ್. ಕುಮಾರ್ ಕಷ್ಟದಲ್ಲಿದ್ದಾಗ ಕೈ ಹಿಡಿದವರು ಸುದೀಪ್. ಸುದೀಪ್ ಸಹಾಯದಿಂದಲೇ ಮಾಣಿಕ್ಯ ಸಿನಿಮಾ ಹೊರಬಂದಿತ್ತು ಎನ್ನಲಾಗಿದೆ. ಆದರೆ ಈಗ ಅದೇ ಕುಮಾರ್ ಸುದೀಪ್ ಕಾಲ್ ಶೀಟ್ ಕೊಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಸುದೀಪ್ ವಿಕ್ರಾಂತ್ ರೋಣ ಬಳಿಕ ನನ್ನ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಕಾಲ್ ಶೀಟ್ ಕೊಡದೇ ಸತಾಯಿಸಿದ್ದಾರೆ. ಈಗ ಬೇರೊಂದು ಸಿನಿಮಾ ಘೋಷಿಸಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಇದಕ್ಕೆ ಸುದೀಪ್ ಯಾವ ರೀತಿ ಉತ್ತರಿಸುತ್ತಾರೆ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ