ಸಾಮಾನ್ಯವಾಗಿ ಚಿತ್ರಗಳು ಹೆಸರನ್ನು ಬದಲಾಯಿಸಿಕೊಳ್ಳುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅದೇ ಸಾಲಿಗೆ ಈಗ ಕ್ಷತ್ರಿಯ ಎಂಬ ಹೆಸರಿನ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೂ ಸಹಿತ ಸೇರಿದೆ. ಪ್ರಜ್ವಲ್ ಮತ್ತು ದೇವರಾಜ್ ಅವರ ನಟನೆಯ ಈ ಚಿತ್ರ ಈಗ ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ. ಈ ಚಿತ್ರದಲ್ಲಿ ಅಪ್ಪ ಮಗ ಮತ್ತೊಮ್ಮೆ ನಟಿಸುತ್ತಿದ್ದಾರೆ ಒಟ್ಟಾಗಿ. ಮಿಸ್ಟರ್ ಡೂಪ್ಲಿಕೇಟ್ ಬಳಿಕ ಅಗೇನ್ ಒಟ್ಟಾಗಿದ್ದಾರೆ ಈ ಜೋಡಿ. ಆ ಚಿತ್ರವನ್ನು 'ರೋಮಿಯೋ' ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದಾರೆ ಚಿತ್ರದ ಚಿತ್ರೀಕರಣ ಮುಗಿದಿದೆ.
ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿದ್ದು, ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ತಯಾರಿಯಲ್ಲಿದೆ.ದರ್ಶನ್ ಅಭಿನಯದ ಅರ್ಜುನ್ ಎಂಬ ಚಿತ್ರ ಕಳೆದ ಐದು ವರ್ಷಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಯಾವುದೇ ಚಿತ್ರ ಬಿಡುಗಡೆ ಆಗಿ ಹತ್ತು ವರ್ಷಗಳ ಬಳಿಕವಷ್ಟೇ ಅದೇ ಹೆಸರಿನ ಚಿತ್ರ ನಿರ್ಮಿಸ ಬಹುದು..
ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ನಿಯಮ. ಆದರೆ ಅದು ಗೊತ್ತಿದ್ದೂ ನಿರ್ದೇಶಕರು ಅದ್ಯಾಕೆ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಅರ್ಜುನ್ ಚಿತ್ರದ ನಿರ್ಮಾಪಕ ಜಯಣ್ಣ ಅವರಿಂದಲೇ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ಪಡೆದುಕೊಂಡಿರುವ ಕಾರಣ, ಅದೂ ಆ ಚಿತ್ರದ ನಿರ್ಮಾಪಕರೇ ಇದನ್ನು ಕೊಟ್ಟ ಕಾರಣ ಯಾವ ಸಮಸ್ಯೆ ಉಂಟಾಗಲ್ಲ ಎಂದು ಅಂದುಕೊಂಡಿದ್ದಾರೆ ಶೇಖರ್. ಅರ್ಜುನ ಚಿತ್ರದಲ್ಲಿ ದೇವರಾಜ್ ಪೊಲೀಸ್ ಅಧಿಕಾರಿ ಆಗಿದ್ದಾರೆ. ಇಲ್ಲಿ ಈ ಜೋಡಿ ತಂದೆ ಮಗನ ಪಾತ್ರದಲ್ಲಿ ನಟಿಸುತ್ತಿಲ್ಲ . ಪ್ರಜ್ವಲ್ ಹಾಗೂ ಭಾಮಾ ನಾಯಕ - ನಾಯಕಿಯಾಗಿದ್ದಾರೆ.ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.