ಆಕಾಶ್, ಅರಸು ಸಿನಿಮಾಗಳಲ್ಲಿ ಅಭಿಮಾನಿಗಳ ದಿಲ್ ಕದ್ದಿದ್ದ ರಮ್ಯಾ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ತೆರ ಮೇಲೆ ಜೊತೆಯಾಗಿ ನೋಡಬೇಕು ಅನ್ನೋ ಆಸೆ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಇದು ಮತ್ತೆ ಸಾಧ್ಯವಾಗಿರಲಿಲ್ಲ. ಆದ್ರೀಗ ಇವರಿಬ್ಬರನ್ನು ಜೊತೆಯಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.ಆದ್ರೆ ಅದು ಸಿನಿಮಾದಲ್ಲಲ್ಲ. ಜಾಹೀರಾತೊಂದರಲ್ಲಿ.
ಅಂದ್ಹಾಗೆ ಇವರಿಬ್ಬರು ಎಲ್ಇರಡಿ ಬಲ್ಬ್ ಜಾಗೃತಿ ಒಂದರ ರಾಯಭಾರಿಗಳಾಗಿ ಆಯ್ಕೆಗೊಂಡಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸುತ್ತಿರುವ ಈ ವಿಶೇಷ ಜಾಹೀರಾತು ಇಂಧನ ಇಲಾಖೆಯ ಜಾಗೃತಿ ಹಾಗೂ ಎಲ್ ಇಡಿ ಬಲ್ಬ್ ಗಳ ಕುರಿತಾಗಿದೆ. ಕರ್ನಾಟಕ ಇಂಧನ ಇಲಾಖೆಯಿಂದ ವಿಶೇಷ ಜಾಗೃತಿ ಅಭಿಯಾನಯಕ್ಕೆ ಇವತ್ತು ಚಾಲನೆ ಸಿಗಲಿದೆ. ಅಲ್ಲದೇ ಶೀಘ್ರದಲ್ಲಿ ಇವರಿಬ್ಬರನ್ನು ತೆರೆ ಮೇಲೆ ನೋಡಬಹುವುದಾಗಿದೆ.