ಬಾಹುಬಲಿ ಚಿತ್ರದ ಪ್ರಮೋಷನ್‌ಗೆಂದು ಮುಂಬೈನಲ್ಲಿ ಬೀಡುಬಿಟ್ಟ ರಾಜಮೌಳಿ

ಬುಧವಾರ, 1 ಜುಲೈ 2015 (09:56 IST)
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕ ರಾಜಮೌಳಿ ಅವರು ವಿಭಿನ್ನ ಸ್ಥಾನ ಪಡೆದಿದ್ದಾರೆ. ಅವ್ರು ನಿರ್ದೇಶಿಸಿದ ಚಿತ್ರಗಳು ಈವರೆಗೂ ಫೇಯಿಲೂರ್ ಆಗಿಲ್ಲ. ಅಲ್ಲದೆ ರಾಜಮೌಳಿ ಅವರಿಗೆ ಯಾವುದು ಏರಿಸ ಬೇಕು , ಎಲ್ಲಿ ತಗ್ಗಿಸ ಬೇಕು ಎನ್ನುವ ಸಂಗತಿಯ ಬಗ್ಗೆ ಪರಿಪೂರ್ಣತೆ ಇದೆ. 
ಬಾಹುಬಲಿ ಚಿತ್ರದ ಪ್ರಮೋಷನ್ ವಿಷಯದಲ್ಲಿ ಆತ ಅಧಿಕ ಪ್ರಮಾಣದಲ್ಲಿ ತನ್ನನ್ನು ತಾನು ಕೇಂದ್ರೀಕರಿಸಿದ್ದಾರೆ. ಅದಕ್ಕೆಂದು ಅವರು ಹೆಚ್ಚುಕಾಲ ಮುಂಬೈನಲ್ಲಿ ಪ್ರಮೋಷನ್ ಗೆಂದು ಕಾಲ ಸವೆಸುತ್ತಿದ್ದಾರೆ. ಅಲ್ಲದೆ ಹಿಂದಿ ಚಿತ್ರ ಬಾಹುಬಲಿಯನ್ನು ಮುಂಬೈ ನಲ್ಲಿ ಬಿಡುಗಡೆ ಮಾಡಲು ಹೊಣೆ ಹೊತ್ತಿದ್ದಾರೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್. 
 
ಈ ಹಿಂದೆ ಈಗ ಹಿಂದಿಯಲ್ಲಿ ಮಕ್ಕಿ ಎನ್ನುವ ಹೆಸರಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರ ಅಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ, ಅದಕ್ಕೆ ಕಾರಣ ಆ ಚಿತ್ರಕ್ಕೆ ಅಗತ್ಯ ಇರುವಷ್ಟು ಪ್ರಮೋಶನ್ ಮಾಡದೆ ಇರುವುದಾಗಿದೆ ಎಂದಿದ್ದಾರೆ ರಾಜಮೌಳಿ. ಆದರೆ ಆಗ ಮಾಡಿದ ತಪ್ಪು ಈಗ ಮಾಡಲಾರೆ ಎಂದಿದ್ದಾರೆ ರಾಜಮೌಳಿ. ಆದರೆ ಬಾಲಿವುಡ್ ನಲ್ಲಿ ತನಗೊಂದು ಸ್ಥಾನ ಸಿಗಲು ಮಕ್ಕಿ ಕಾರಣ ಆಗಿದೆ ಎನ್ನುವುದನ್ನು ಸಹಿತ ಅವರು ತಿಳಿಸಿದ್ದಾರೆ . 
 
ಆದರೆ  ಬಾಹುಬಲಿಯಲ್ಲಿ ಪ್ರಮೋಷನ್ ವಿಷಯದಲ್ಲಿ ನಿರ್ಲಕ್ಷ ತೋರುವುದಿಲ್ಲ ಎನ್ನುತ್ತಾ ಅದಕ್ಕೆ ಕಾರಣ ಕರಣ್ ಜೋಹರ್ ಎಂದು ಹೇಳಿದ್ದಾರೆ. ಏಕೆಂದರೆ ಕರಣ್ ಈಗ ಬಾಲಿವುಡ್ ನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಅತ್ಯಂತ ಪ್ರಸಿದ್ಧ ವ್ಯಕ್ತಿ ನೇತೃತ್ವದಲ್ಲಿ ಬಾಹುಬಲಿ ಬಿಡುಗಡೆ ಆಗುತ್ತಿರುವುದಕ್ಕೆ ತನಗೆ ನಿಶ್ಚಿಂತೆ ಉಂಟಾಗಿದೆ ಎಂದು ಹೇಳಿದ್ದಾರೆ ರಾಜಮೌಳಿ. ಅವರ ಈ ಕನಸು ನನಸಾಗಲಿ ಎನ್ನುವ ಶುಭ ಹಾರೈಕೆ ನಮ್ಮದಾಗಿದೆ. 

ವೆಬ್ದುನಿಯಾವನ್ನು ಓದಿ