ಪವನ್ ಒಡೆಯರ್ ಚಿತ್ರದಲ್ಲಿ ರಜನಿಕಾಂತ್ ಅಭಿನಯ...?!

ಗುರುವಾರ, 2 ಏಪ್ರಿಲ್ 2015 (09:47 IST)
ಕಳೆದ ಎರಡು ವರ್ಷಗಳಿಂದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಾಲ ಚೆನ್ನಾಗಿಲ್ಲ. ಏಕೆಂದರೆ ಅವರು ಅಭಿನಯಿಸಿರುವ ರೋಬೋ ಚಿತ್ರದ ನಂತರ ಹೇಳಿ ಕೊಳ್ಳುವ ಯಶಸ್ಸು ಸಿಗಲೇ ಇಲ್ಲ. ಅವರ ಮಾಗಲಿ ನಿರ್ದೇಶಿಸಿದ ಚಿತ್ರ ಕೊಚ್ಚಾಡಿಯನ್ ಹೇಳಿಕೊಳ್ಳುವಂತಹ ಗೆಲುವು ಪಡೆಯಲೇ ಇಲ್ಲ. ಇದು ಸಂಪೂರ್ಣವಾಗಿ ಅನಿಮೇಶನ್ ಇರುವ ಚಿತ್ರವಾದ ಕಾರಣ ಅವರ ಅಭಿಮಾನಿಗಳಿಗೆ ಅಷ್ಟು ಇಷ್ಟ ಆಗಲಿಲ್ಲ. 
ಅದು ನಷ್ಟದ ಪರಿಚಯ ಮಾಡಿಸಿತ್ತು. ಅದಾದ ಬಳಿಕ ಲಿಂಗಾ ಬಂತು. ಅದೂ ಸಹಿತ ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಇದರಿಂದ ಅತಿ ದೊಡ್ಡ ಸಂಕಷ್ಟಕ್ಕೆ ಒಳಗಾಗ ಬೇಕಾಯ್ತು ರಜನಿ. ಈಗ ಶಂಕರ್ ಅವರ  ನಿರ್ದೇಶನದ ರೋಬೋ ಚಿತ್ರದ ಮುಂದಿನ ಭಾಗದ ಕೆಲಸ ಅಂದರೆ ಎರಡನೇ ಭಾಗದ ಬಗ್ಗೆ ಕಾರ್ಯಗಳು ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಅದರಲ್ಲಿ ರಜನಿಕಾಂತ್ ಅವರು ನಟಿಸಲು ಒಪ್ಪಿದ್ದಾರೆ ಎನ್ನುವುದು ಕೇಳಿ ಬಂದಿದ್ದರೂ, ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 
 
ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವಾಗ ಯೋಚಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಒಂದು ನಿರ್ಣಯಕ್ಕೆ ಬಂದಿದ್ದಾರೆ ಸೂಪರ್ ಸ್ಟಾರ್. ಇದಕ್ಕೆ ಹೊಂದಿಕೆಯಾಗುವಂತೆ ಕನ್ನಡದ ನಿರ್ದೇಶಕ ಪವನ್ ವಡೆಯರ್  ಅವರ ಬಳಿ ಕಥೆ ಕೇಳಿದ್ದಾರಂತೆ. ಕಥೆ ಇಷ್ಟವಾಗಿದೆ ಎನ್ನುವ ಮಾತನ್ನು ರಜನಿ ಅವರು ಹೇಳಿದ್ದಾರಂತೆ. ಆದರೂ ಅದನ್ನು ನಿರ್ದೇಶಿಸಲು ಅವರ ಕಡೆಯಿಂದ ಹಸಿರು ನಿಶಾನೆ ಸಿಕ್ಕಿಲ್ಲವಂತೆ. ನಂತರ ಹೇಳ್ತೀನಿ ಎಂದಿದ್ದಾರಂತೆ ರಜನಿ ಅವರು. ಆದರೆ ಈಗ ಈ ಪ್ರಾಜಕ್ಟ್ ತನಗೆ ಹೊಂದಿಕೆ ಆಗುವಂತಿರುವ ಸಾಧ್ಯತೆ ಇರುವ ಬಗ್ಗೆ ಅನ್ನಿಸಿರುವ ಕಾರಣ ಅವರು ಇದರತ್ತ ದೃಷ್ಟಿ ನೆಟ್ಟಿರುವ ಬಗ್ಗೆ ಸುದ್ದಿ ಹರಡಿದೆ. ಅಂದರೆ ಈ ಚಿತ್ರದ ಬಗ್ಗೆ ಸಧ್ಯದಲ್ಲೇ ಚರ್ಚಿಸುವ ಎಲ್ಲ ಸಾಧ್ಯತೆಗಳಿರುವ ಬಗ್ಗೆ ಸುದ್ದಿ ಹೊರ ಬಂದಿದೆ. ಒಟ್ಟಾರೆ ಎಲ್ಲ ಮಾತುಕತೆಗಳು ಸೂಕ್ತರೀತಿಯಲ್ಲಿ ನಡೆದರೆ ರಜನಿಕಾಂತ್ ಅವರ ಮುಂದಿನ ಚಿತ್ರದ ನಿರ್ದೇಶನವನ್ನು ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ವಡೆಯರ್ ನಿಶ್ಚಿತವಾಗಿ ನಿರ್ದೇಶಿಸುತ್ತಾರೆ. ಹಾಗೆ ಆಗಲಿ ಎನ್ನುವ ಹಾರೈಕೆ ನಮ್ಮದಾಗಿದೆ. 

ವೆಬ್ದುನಿಯಾವನ್ನು ಓದಿ