ರಜನಿಕಾಂತ್ ಯು ಟರ್ನ್ ... ಬೆರಗಾದ ಮಾಧ್ಯಮಿಗಳು!

ಶುಕ್ರವಾರ, 25 ಏಪ್ರಿಲ್ 2014 (09:43 IST)
ನಿನ್ನೆ ತಮಿಳು ನಾಡಲ್ಲಿ ನಡೆದ  ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ಮತದಾನ ನಮ್ಮ ಹಕ್ಕು, ಅದನ್ನು ಸರಿಯಾಗಿ ಬಳಸಿಕೊಳ್ಳಿ ಎನ್ನುವ ಸಂದೇಶ ನೀಡಿದ್ದರು. ಲೋಕ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಿನ್ನೆ ತಮಿಳು ನಾಡಲ್ಲಿ ನಡೆಯಿತು. ರಾಜಧಾನಿ ಚೆನ್ನೈನಲ್ಲಿ  ಮುಂಜಾನೆ ಒಟ್ ಹಾಕಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ ರಜನಿ  ಮತವನ್ನು ಚಲಾಯಿಸಿ ಎಂದು ಹೇಳಿದರು. 
 
ಈ ಸಾರ್ವತ್ರಿಕ ಚುನಾವಣೆಯಲ್ಲಿ ನೀವು ಯಾರ ಜೊತೆ ಆಗಿದ್ದೀರಿ ಎಂದು  ಮಾಧ್ಯಮಿಗಳು ಪ್ರಶ್ನಿಸಿದಾಗ , ನಾನು ಯಾರನ್ನು ಬೆಂಬಲಿಸುತ್ತಿಲ್ಲ ಎನ್ನುವ ಮಾತನ್ನು ಹೇಳಿ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದರು. ಕೆಲವು ದಿನಗಳ ಹಿಂದೆ ಇವರು ಮೋದಿ ಅವರನ್ನು ಪ್ರಧಾನಿಯಾಗಿ ನೋಡ ಬೇಕು ಎನ್ನುವ ಆಶಯ ವ್ಯಕ್ತ ಪಡಿಸಿದ್ದರು. 
 
ಆದರೆ ಈಗ ಇಂತಹ ಹೇಳಿಕೆ ನೀಡಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ. ಒಟ್ಟಾರೆ ರಜನಿ ಅವರ ನಡೆ ಏನು ಎನ್ನುವುದು ಸದ್ಯಕ್ಕೆ ಯಾರೂ ಅರಿಯದ ಸತ್ಯವಾಗಿದೆ ಎಂದೇ ಹೇಳ ಬಹುದಾಗಿದೆ. 

ವೆಬ್ದುನಿಯಾವನ್ನು ಓದಿ