ಮತ್ತೊಂದು ವಿವಾದದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್‌

ಬುಧವಾರ, 24 ಜೂನ್ 2015 (10:20 IST)
ತಮಿಳುನಾಡು ಸೂಪರ್ ಸ್ಟಾರ್ ಕಾಲ ಯಾಕೋ ಸರಿಯಾಗಿಲ್ಲ ಎಂದೇ ಹೇಳ ಬಹುದಾಗಿದೆ. ಯಾಕೇಂದ್ರೆ ಅವರು ಹೋದ ಕಡೆ ಮತ್ತು ಮಾಡಿದ ಕೆಲಸಗಳು ಅವರು ವಿರುದ್ಧ ತಿರುಗಿವೆ. ವಿಷಯಕ್ಕೆ ಬರುವುದಾದರೆ ಅವರ ಮಗಳು ನಿರ್ಮಿಸಿದ ಕೊಚ್ಚಾಡಿಯನ್ ಮಕಾಡೆ ಮಲಗಿದ ಬಳಿಕ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಸುತ್ತುವರೆಯುತ್ತಿವೆ. ಕೊಚ್ಚಾಡಿಯನ್ ಸಂಪೂರ್ಣವಾಗಿ ಅನಿಮೇಶನ್ ಚಿತ್ರವಾದ ಕಾರಣ ಅದು ಗೆಲುವಿನ ಬಾಗಿಲು ತಟ್ಟಲಿಲ್ಲ. ಅದಾದ ಬಳಿಕ ಬಂದ ಲಿಂಗಾ ಬಗ್ಗೆ ಹೇಳುವಷ್ಟೇ ಇಲ್ಲ. 
ಅದು ಬಾಕ್ಸಾಫೀಸಲ್ಲಿ ಸೋತು ಹೈರಾಣಾಗಿದ್ದಲ್ಲದೆ, ಅನೇಕಾನೇಕ ಸಮಸ್ಯೆಗಳನ್ನು ತಂದಿಟ್ಟಿತು. ಈ ವಿವಾದಗಳು ಸ್ವಲ್ಪ ತಣ್ಣಗಾಗುವಷ್ಟರಲ್ಲಿ ಮದ್ರಾಸ್ ಹೈ ಕೋರ್ಟ್ ಕಡೆಯಿಂದ ಮತ್ತೊಂದು ಸಮಸ್ಯೆ ಅವರನ್ನು ಆವರಿಸಿದೆ. ಅಂದರೆ ಆ ಹೈ ಕೋರ್ಟ್ ಕಡೆಯಿಂದ ನೋಟೀಸ್ ಬಂದಿದೆ ರಜನಿಕಾಂತ್ ಅವರಿಗೆ. 
 
ಮುಖ್ಯ ವಿಷಯವೇನೆಂದರೆ ರಜನಿಕಾಂತ್ ಅವರ ಬೀಗರು(ಹೀರೋ ಧನುಷ್ ತಂದೆ) ಕಸ್ತೂರಿ ರಾಜ ಅವರು 2012ರಲ್ಲಿ ಮೈ ಹೂ ರಜನಿಕಾಂತ್ ಚಿತ್ರದ ನಿರ್ಮಾಣಕ್ಕೆಂದು ಮುಕುಂದ್ ಬೋತ್ರಾ ಅವರ ಬಳಿ 40 ಲಕ್ಷಗಳಷ್ಟು ಮೊತ್ತವನ್ನು ಸಾಲವಾಗಿ ಪಡೆದಿದ್ದರಂತೆ. ಆ ಸಿನಿಮಾ ಪೂರ್ಣವಾಗಲು ಮತ್ತಷ್ಟು ಹಣವನ್ನು ಪಡೆದರಂತೆ. ಅಂದರೆ ಸುಮಾರು 25ಲಕ್ಷಗಳಷ್ಟು ಮೊತ್ತವನ್ನು  ಸಾಲವಾಗಿ ಪಡೆದಿದ್ದಾರೆ. ಆ ಸಮಯದಲ್ಲಿ ಶ್ಯೂರಿಟಿ ನೀಡಿದ್ದಾರೆ ಹೆಣ್ಣುಕೊಟ್ಟ ತಪ್ಪಿಗೆ ಸೂಪರ್ ಸ್ಟಾರ್. ಬೀಗರು ಹಣವನ್ನು ತೀರಿಸದೆ ಹೋದಲ್ಲಿ ತಾವು ತೀರಿಸುವುದಾಗಿ ಹೇಳಿದ್ದರಂತೆ ರಜನಿ ಅವರು. 
 
ಅದಾದ ಬಳಿಕ ಕಸ್ತೂರಿರಾಜ ನೀಡಿದ ಚೆಕ್ಕುಗಳು ಬೌನ್ಸ್ ಆಗಿದ್ದ ಕಾರಣ ಮುಕುಂದ್ ಬೋತ್ರ ಅವರು ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಈಗ ರಜನಿ ಕಡೆಗೆ ಕೆಂಗಣ್ಣು ಬೀರಿದೆ. ಕಷ್ಟ ಕಾಲ ಅನ್ನೋದು ಇದನ್ನೇ ಎಂದು ಕಾಣುತ್ತೆ. ಒಂದು ಮುಗಿದರೆ ಮತ್ತೊಂದು. ಅದು ಮುಗಿದರೆ ಮಗದೊಂದು ಕಷ್ಟಗಳು ಹಿಂಬಾಲಿಸುತ್ತಲೇ ಇದೆ.

ವೆಬ್ದುನಿಯಾವನ್ನು ಓದಿ