ಕುತೂಹಲ ಸೃಷ್ಟಿಸಿದ ರಜನೀಕಾಂತ್-ಬಿಜೆಪಿ ನಾಯಕರ ಭೇಟಿ

ಸೋಮವಾರ, 7 ಆಗಸ್ಟ್ 2017 (12:31 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸದ್ಯದಲ್ಲೇ ರಾಜಕೀಯ ಸೇರುತ್ತಾರೆ ಎಂಬೆಲ್ಲಾ ಸುದ್ದಿಗಳಿಗೆ ಪುಷ್ಠಿ ನೀಡುವಂತಹ ಘಟನೆಯೊಂದು ನಡೆದಿದೆ.

 
ಬಿಜೆಪಿ ನಾಯಕರಾದ ಪೂನಂ ಮಹಾಜನ್ ಮತ್ತಿತರನ್ನು ರಜನೀಕಾಂತ್ ಭೇಟಿಯಾಗಿದ್ದು, ಅವರ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದೆ.

ಸೆಪ್ಟೆಂಬರ್ ನಲ್ಲಿ ತಮ್ಮ ರಾಜಕೀಯ  ಭವಿಷ್ಯದ ಬಗ್ಗೆಅಭಿಮಾನಿಗಳಿಗೆ ತಿಳಿಸುವುದಾಗಿ ರಜನೀಕಾಂತ್ ಹಿಂದೆ ಹೇಳಿದ್ದರು. ಅದಕ್ಕೆ ಪೂರ್ವಭಾವಿಯಾಗಿಯೇನೋ ಎಂಬಂತೆ ಬಿಜೆಪಿ ನಾಯಕರೊಂದಿಗಿನ ಭೇಟಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ.. ವಿವಾದಕ್ಕೆಡೆ ಮಾಡಿದ ಜಗ್ಗೇಶ್ ಟ್ವೀಟ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ