ಸಂಜಯ್ ದತ್ ಜೀವನಾಧಾರಿತ ಸಿನಿಮಾ ಮಾಡುತ್ತಿರೋದು ಅವರಿಗೆ ಪ್ರಚಾರ ನೀಡೋದಕ್ಕಲ್ಲ- ಹಿರಾನಿ

ಶುಕ್ರವಾರ, 27 ನವೆಂಬರ್ 2015 (10:46 IST)
ಸಂಜಯ್ ದತ್ ಅವರ ಜೀವನ ಕಥೆ ಬಾಲಿವುಡ್‌ನಲ್ಲಿ ಸಿನಿಮಾವಾಗುತ್ತೆ ಅನ್ನೋ ಸುದ್ದಿ ಬಹು ದಿನಗಳಿಂದ ಹರಿದಾಡುತ್ತಲೇ ಇದೆ. ಅಲ್ಲದೇ ಸಂಜಯ್ ದತ್ ಅವರು ಕೂಡ ತನ್ನ ಜೀವನ ಕಥೆ ಸಿನಿಮಾವಾಗುತ್ತಿರೋದಾಗಿ ತಿಳಿಸಿದ್ದರು. ಆದ್ರೆ ಸಿನಿಮಾದ ನಿರ್ದೇಶಕರಾದ ರಾಜ್ ಕುಮಾರ್ ಹಿರಾನಿ ಮಾತ್ರ ಈ ಬಗ್ಗೆ ಎಲ್ಲೂ ಹೆಚ್ಚಿನ ಮಾಹಿತಿಯನ್ನು ಬಾಯ್ಬಿಟ್ಟಿರಲಿಲ್ಲ. ಆದ್ರೀಗ ಸಿನಿಮಾದ ಬಗ್ಗೆ ಹಿರಾನಿ ಬಾಯ್ಬಿಟ್ಟಿದ್ದಾರೆ.

ಸಂಜಯ್ ದತ್ ಸಿನಿಮಾ ನಿರ್ದೇಶನ ಮಾಡುತ್ತಿರುವಾಗ ಬಗ್ಗೆ ತಿಳಿಸಿರುವ ಹಿರಾನಿ ನಾನು ನನ್ನ ಗೆಳೆಯ ಸಂಜಯ್ ದತ್‌ನಿಗೆ ಪ್ರಚಾರ ಕೊಡಿಸುವುದಕ್ಕಾಗಿ ಈ ಸಿನಿಮಾವನ್ನು ಮಾಡುತ್ತಿಲ್ಲ. ಅಲ್ಲದೇ ಈ ಸಿನಿಮಾವನ್ನು ಮಾಡೋದಕ್ಕಾಗಿ ನಾನು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ ಅಂತಾ ಹೇಳಿದ್ದಾರೆ. ಈ ಸಿನಿಮಾವನ್ನು ವಿದು ವಿನೋದ್ ಚೋಪ್ರಾ ನಿರ್ಮಿಸುತ್ತಿದ್ದಾರೆ. ಇನ್ನು ವಿದು ವಿನೋದ್ ಚೋಪ್ರಾ ಜೊತೆ ಸಂಜಯ್ ಕೂಡ ಕೈ ಜೋಡಿಸುತ್ತಿದ್ದಾರೆ. ಸಿನಿಮಾದ ಸ್ಕ್ರಿಫ್ಟ್ ಕೆಲಸಗಳು ಈಗಾಗಲೇ ಆರಂಭವಾಗಿದೆ ಎಂದು ಹಿರಾನಿ ಹೇಳಿದ್ದಾರೆ.
 
ಇನ್ನು ಸಿನಿಮಾದಲ್ಲಿ ಸಂಜಯ್ ದತ್ ಪಾತ್ರವನ್ನು ರಣ್ ಬೀರ್ ಕಪೂರ್ ಅವರು ನಿರ್ವಹಿಸಲಿದ್ದಾರಂತೆ. ರಣ್ ಬೀರ್ ಅವರಿಗೂ ಸಂಜಯ್ ದತ್ ಅವರ ಪಾತ್ರವನ್ನು ತಾವೇ ಮಾಡುತ್ತಿರೋದಕ್ಕಾಗಿ ತುಂಬಾನೇ ಖುಷಿಯಾಗಿದೆಯಂತೆ. ಸಿನಿಮಾಕ್ಕಾಗಿ ಅವರು ಕೂಡ ಮಾನಸಿಕವಾಗಿ ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಇನ್ನು ಸಂಜಯ್ ದತ್ ಅವರಿಗೆ ರಣ್ ಬೀರ್ ಅತೀ ಆಪ್ತರಾಗಿರೋದರಿಂದ ಅವರ ಪಾತ್ರ ನಿರ್ವಹಿಸೋದು ಕಷ್ಟವಾಗಲ್ಲ ಎಂದಿದ್ದಾರೆ ರಣ್ ಬೀರ್.

ವೆಬ್ದುನಿಯಾವನ್ನು ಓದಿ