ಮೊದಲರ್ಧ ಭಾಗವನ್ನು ಪವನ್ ಮತ್ತು ಉಳಿದರ್ಧ ಭಾಗವನ್ನು ನಾಲು ನಿರ್ದೇಶಿಸುತ್ತೇನೆ ಎಂದು ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಸರ್ತಿ ಚರ್ಚೆಗಳನ್ನು ಮಾಡಲಾಗಿದೆ ಎಂಬುದಾಗಿ ಸಹ ಹೇಳಿದ್ದಾರೆ ರಕ್ಷಿತ್. ಪವನ್ ಈಗಾಗಲೇ ಚಿತ್ರಕ್ಕೆ ಸಂಬಂಧಪಟ್ಟಂತೆ ತಮ್ಮ ಕೆಲಸ ಆರಂಭಿಸಿದ್ದಾರಂತೆ. ರಕ್ಷಿತ್ ಈಗ ಅದರತ್ತ ತಮ್ಮ ಕೆಲಸ ಆರಂಭಿಸಲು ಬೇಕಾದಂತಹ ಸಿದ್ಧತೆ ನಡಿಸಿದ್ದಾರಂತೆ. ಎರಡು ಭಿನ್ನ ಮನಸ್ಥಿತಿಯ ಪ್ರತಿಭಾವಂತರು ಸೇರಿ ಚಿತ್ರ ತಯಾರಿಸುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸತನ ಉಂಟು ಮಾಡುತ್ತದೆಯೇ ? ಇವರು ಸಹ ಹಳೆಯ ನಿರ್ದೇಶಕ ಜೋಡಿಯಂತೆ ಹೆಚ್ಚು ಜನಪ್ರಿಯರಾಗುತ್ತಾರಾ ? ನೋಡುವಾ !