ಜೈಲಿನಲ್ಲಿ ದರ್ಶನ್ ನೋಡಿ ಕಣ್ಣೀರು ಹಾಕಿದ ರಕ್ಷಿತಾ, ಮಾಧ್ಯಮದ ಮುಂದೆ ಹೇಳಿದ್ದೇನು

Sampriya

ಶನಿವಾರ, 29 ಜೂನ್ 2024 (19:17 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಸ್ನೇಹಿತೆ, ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ದಂಪತಿ ಬಂದಿದ್ದಾರೆ.

ಇನ್ನೂ ನಟ ದರ್ಶನ್ ಅವರನ್ನು ಭೇಟಿಯಾಗಿ ರಕ್ಷಿತಾ ಪ್ರೇಮ್ ವಾಪಾಸ್ ಆಗಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿದ ರಕ್ಷಿತಾ, ನಮಗೆ ಈ ಪ್ರಕರಣದ ಬಗ್ಗೆ ಬೇಜಾರಿಗಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ ಎಂದರು.

ಇನ್ನೂ ಜೈಲಿನಲ್ಲಿ ದರ್ಶನ್ ಜತೆ ಪ್ರೇಮ್ ರಕ್ಷಿತಾ ದಂಪತಿ ಒಂದು ಗಂಟೆ ಮಾತುಕತೆ ನಡೆಸಿದ್ದಾರೆ. ಆದರೆ ದಾಸನ ಜತೆ ಏನೂ ಮಾತುಕತೆ ನಡೆಸಿರುವ ಬಗ್ಗೆ ರಕ್ಷಿತಾ ಹೇಳಲು ನಿರಾಕರಿಸಿದರು.

ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿರುವ ರಕ್ಷಿತಾ ಹಾಗೂ ದರ್ಶನ್ ಒಳ್ಳೆಯ ಫ್ರೆಂಡ್ಸ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ