ಚಿರು ಸರ್ಜಾಗೆ ಶ್ರದ್ಧಾಂಜಲಿ ಅರ್ಪಿಸಿದ ರಕ್ಷಿತ್ ಶೆಟ್ಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

ಮಂಗಳವಾರ, 9 ಜೂನ್ 2020 (10:11 IST)
ಬೆಂಗಳೂರು: ಚಿರು ಸರ್ಜಾ ಭಾನುವಾರ ಹೃದಯಾಘಾತದಿಂದ ನಿಧನರಾದ ಆಘಾತಕಾರಿ ಸುದ್ದಿಗೆ ಇಡೀ ಸ್ಯಾಂಡಲ್ ವುಡ್ ತಕ್ಷಣವೇ ಸಂತಾಪ ಸೂಚಿಸಿತ್ತು. ಆದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿಯೂ ಒಂದೇ ಒಂದು ಮೆಸೇಜ್ ಬರೆದಿರಲಿಲ್ಲ.


ರಕ್ಷಿತ್ ಇದೇ ಕಾರಣಕ್ಕೆ ಈಗ ಟ್ರೋಲ್ ಆಗಿದ್ದಾರೆ. ನಿನ್ನೆ ಸಂಜೆ ತಡವಾಗಿ ಚಿರು ಸರ್ಜಾ ಸಾವಿಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಕ್ಕೆ ಅವರನ್ನು ಟ್ವಿಟರಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

‘ಅಣ್ಣಂಗೆ ಈಗ ಎಚ್ಚರವಾಯ್ತಾ?’ ಇಷ್ಟು ಹೊತ್ತು ಜ್ಞಾಪಕವಾಗಿರಲಿಲ್ವಾ? ಎಲ್ಲಿದ್ರಿ? ಎಂದು ಹಲವರು ಟ್ವೀಟ್ ಮೂಲಕ ರಕ್ಷಿತ್ ಗೆ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ