ಸ್ಯಾಂಡಲ್ ವುಡ್ ನ ಅಪರೂಪದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ನಿರ್ಮಾಣದಲ್ಲಿ ಅನೇಕ ಚಿತ್ರಗಳು ಕನ್ನಡಿಗರ ಮನರಂಜಿಸಿವೆ. ಮಸ್ತ್ ಮಜಾ ಮಾಡಿ, ಅಪ್ಪು ಪಪ್ಪು, ಹಾಗೂ ಸ್ನೇಹಿತರು ಚಿತ್ರಗಳ ಈಗ ರಾಮ್ ಲೀಲ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ . ಅಮೂಲ್ಯ ಹಾಗೂ ಚಿರಂಜೀವಿ ಸರ್ಜಾ ಅವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಹಾಡುಗಳ ಚಿತ್ರೀಕರಣ ಕಳೆದ 15 ದಿನಗಳಿಂದ ಜಾರ್ಜಿಯ, ಬತುಮಿ ಹಾಗೂ ರಷ್ಯ ಗಡಿ ಪ್ರದೇಶಗಳಲ್ಲಿ ನಡೆಯಿತು. ಈಗ ಚಿತ್ರತಂಡ ತಾಯ್ನಾಡಿಗೆ ಮರಳಿದೆ.
ಇದನ್ನು ವಿಜಯ್ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ.ಅನೂಪ್ ರೆಬುನ್ಸ್ ಸಂಗೀತ ನಿರ್ದೇಶನ, ಭರಣಿ ಕೆ ಧರಣಿ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ, ರವಿವರ್ಮ ಅವರ ಸಾಹಸ ಈ ಚಿತ್ರಕ್ಕಿದೆ. ಸಾಧುಕೋಕಿಲ, ರಂಗಾಯಣ ರಘು, ರವಿಕಾಳೆ, ಚಿಕ್ಕಣ್ಣ , ರವಿಶಂಕರ್ ಗೌಡ, ಶೋಭರಾಜ್ ಊರ್ವಶಿ, ತುಳಸಿ ಮುಂತಾದವರು ಈ ಚಿತ್ರ್ರದಲ್ಲಿ ನಟಿಸಿದ್ದಾರೆ.