ತೆರೆ ಮೇಲೆ ಒಂದಾಗ್ತಿದ್ದಾರೆ ರಮೇಶ್-ಗಣೇಶ್

ಶನಿವಾರ, 28 ನವೆಂಬರ್ 2015 (10:30 IST)
ಸ್ಟಾರ್ ನಿರ್ಮಾಪಕ ಎಂದು ಕರೆಸಿಕೊಳ್ಳುವ ರಾಕ್ ಲೈನ್ ವೆಂಕಟೇಶ್ ಇದೀಗ ಕನ್ನಡದಲ್ಲಿ ಭರ್ಜರಿ ಸಿನಿಮಾವೊಂದನ್ನು ಮಾಡಲು ರೆಡಿಯಾಗಿದ್ದಾರೆ. ತೆಲುಗಿನ ಸೂಪರ್ ಹಿಟ್ 'ಭಲೇ ಭಲೇ ಮಗಾಡಿವೋಯ್', ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ ರಾಕ್ ಲೈನ್. ಇದೀಗ ಸಿನಿಮಾದ ಕುರಿತು ಇನ್ನೂ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ಅಂದ್ದಾಗೆ ಕನ್ನಡದಲ್ಲಿ ಈ ಸಿನಿಮಾವನ್ನು ನಟ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರಂತೆ. ಈ ಹಿಂದೆ ಈ ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಾರೆ ಎನ್ನಲಾಗಿತ್ತು.ಆದ್ರೀಗ ಯಶ್ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಆಯ್ಕೆಯಾಗಿದ್ದಾರೆ. ಗಣೇಶ್‌ಗೆ ಅಭಿನಯದಲ್ಲಿ ರಮೇಶ್ ಅರವಿಂದ್ ಕೂಡ ಸಾಥ್ ನೀಡಲಿದ್ದಾರಂತೆ. ಈಗಾಗಲೇ ಗಣೇಶ್ ಹಾಗೂ ರಮೇಶ್ ಜೊತೆಯಾಗಿ ನಟಿಸುತ್ತಿದ್ದಾರೆ ಅನ್ನೋದನ್ನು ಕೇಳಿ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರಂತೆ.
 
ಸದ್ಯ ರಮೇಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಆವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಗಣೇಶ್ ಮುಂಗಾರು ಮಳೆ-2 ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಬ್ಯುಸಿಯಾಗಿರೋದರಿಂದ ಸದ್ಯಕ್ಕಂತೂ ಶೂಟಿಂಗ್ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಿನಿಮಾದ ಬಗ್ಗೆ ರಮೇಶ್ ಇಲ್ಲಾ ರಾಕ್‌ಲೈನ್ ವೆಂಕಟೇಶ್ ಆಗಲಿ ಹೆಚ್ಚಿನ ಮಾಹಿತಿ ನೀಡೋವರೆಗೂ ನಾವು ಕಾಯಲೇ ಬೇಕು.

ವೆಬ್ದುನಿಯಾವನ್ನು ಓದಿ