ಸೂರ್ಯ ಚಿತ್ರದಲ್ಲಿ ನೀಲಾಂಬರಿಗೆ ಮುಖ್ಯಪಾತ್ರ

ಭಾನುವಾರ, 4 ಡಿಸೆಂಬರ್ 2016 (07:32 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪಡಯಪ್ಪಾ ಚಿತ್ರದಲ್ಲಿ ರಮ್ಯಾಕೃಷ್ಣ ಪೋಷಿಸಿದ್ದ ನೀಲಾಂಬರಿ ಪಾತ್ರವನ್ನು ಮರೆಯುವಂತಿಲ್ಲ. ಬಹಳ ಕಾಲದ ನಂತರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯಾಗಿ ಪಾತ್ರದಲ್ಲಿ ಜೀವಿಸಿದ್ದರು. ಇದೀಗ ನಟ ಸೂರ್ಯ ಅವರ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಲು ಸಿದ್ಧವಾಗಿದ್ದಾರೆ.
 
ಸಿಂಗಂ 3 ಚಿತ್ರವನ್ನು ಸೂರ್ಯ ಮುಗಿಸಿದ್ದು ಸದ್ಯಕ್ಕೆ ವಿಘ್ನೇಶ್ ಶಿವನ್ ನಿರ್ದೇಶನದ ತಾನ್ ಸೇರ್ನದ ಕೂಟಂ ಅನ್ನೋ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ. ಬಹಳ ಕಾಲದ ಬಳಿಕ ಈ ಚಿತ್ರದಲ್ಲಿ ಹಾಸ್ಯ ನಟ ಸೆಂಥಿಲ್ ಬಣ್ಣ ಹಚ್ಚುತ್ತಿದ್ದಾರೆ. ನಟಿ ರೇವತಿ ಮಾಜಿ ಪ್ರಿಯಕರ ಸುರೇಶ್ ಮಿನನ್, ಆರ್ ಜೆ ಬಾಲಾಜಿ ಪಾತ್ರವರ್ಗ ಇದ್ದು ರಮ್ಯಾ ಕೃಷ್ಣ ಅವರದು ಗಮನಾರ್ಹ ಪಾತ್ರ ಎನ್ನಲಾಗಿದೆ.
 
ನಿರ್ದೇಶಕ ವಿಘ್ನೇಶ್ವರ್ ಕಥೆ ಹೇಳಿದ ಕೂಡಲೆ ನನಗಿಷ್ಟ ಆಯಿತು. ನನ್ನ ಪಾತ್ರದ ಬಗ್ಗೆ ಹೇಳಿದರೆ ಕಥೆಯ ಪ್ರಮುಖ ತಿರುಳು ಗೊತ್ತಾಗಿಬಿಡುತ್ತದೆ. ಈಗ ಅದನ್ನು ಹೇಳಲಾರೆ ಎಂದಿದ್ದಾರೆ. ತಾಜ್ ಸೇನ್ ಸೇರ್ನದ ಕೂಟಂ ಚಿತ್ರದಲ್ಲಿ ತಮ್ಮದು ಮುಖ್ಯ ಪಾತ್ರ. ಸೂರ್ಯ ಜೊತೆಗೆ ನೇರ ಸಂಪರ್ಕ ಇರುತ್ತೆ ಎಂದಿದ್ದಾರೆ. ಈ ಚಿತ್ರಕ್ಕಾಗಿ ರಮ್ಯಾಕೃಷ್ಣ 35 ದಿನಗಳ ಕಾಲ್‌ಶೀಟ್ ಕೊಟ್ಟಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ