ಚಿತ್ರಾನ್ನ ತಿನ್ನುವ ಚಡಪಡಿಕೆಯಲ್ಲಿ ರಮ್ಯ ? ಹಾಗಾದ್ರೆ ನಮ್ಮೂರ ಗಿಣಿ ಊರಿಗೆ ಹಿಂತಿರುಗುತ್ತಾ?

ಶನಿವಾರ, 15 ನವೆಂಬರ್ 2014 (10:33 IST)
ಚಿತ್ರಾನ್ನ ಚಿತ್ರಾನ್ನ ಎಂದು ಉಪೇಂದ್ರ ಹಾಡಿ ಆ ಮುಖಾಂತರ ತಮಗೆ ಚಿತ್ರಾನ್ನದ ಮೇಲಿರುವ ಪ್ರೀತಿಯನ್ನು ತೋರಿದ್ದರು. ಅದೇ ರೀತಿ ಚಿತ್ರಾನ್ನದ ನೆನಪಲ್ಲಿ ರಮ್ಯ ಇದ್ದಾರೆ ಎಂದು ಮೂಲವೊಂದು ತಿಳಿಸಿದೆ. ರಮ್ಯ ಅಲಿಯಾಸ್ ದಿವ್ಯ ಸ್ಪಂದನ ಕನ್ನಡ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತ ಎಲ್ಲ ಭಾಷೆಗಳಲ್ಲೂ ನಟಿಸಿದ ಕನ್ನಡತಿ. ನಟನೆಯ ಜೊತೆಗೆ ರಾಜಕೀಯಕ್ಕೂ ಸಹಿತ ಎಂಟ್ರಿ ಆದ ಬಳಿಕ ಆಕೆಯು ತಾರ ಬದುಕಿನ ಕಡೆಗೆ ಹೆಚ್ಚು ಗಮನ ನೀಡದೆ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಳು.

ಪ್ರಾಯಶಃ ರಮ್ಯ ಇರುವ ಕಡೆ ವಿವಾದ ಇರಲೇ ಬೇಕು ಎನ್ನುವಂತೆ ರಾಜಕೀಯದಲ್ಲೂ ಸಹಿತ ಆಕೆಯ ವಿವಾದ ಮುಂದುವರೆಯಿತು. ಈಗ ಸೋತು ನಾಪತ್ತೆಯಾದ ರಮ್ಯ ಎಲ್ಲಿರಬಹುದು ಎಂದು ಮಾಧ್ಯಮಿಗಳು ಹುಡುಕಾಡುತ್ತಲೇ ಇರುವಾಗ ಇತ್ತೀಚಿಗೆ ಆಕೆ ನ್ಯೂಯಾರ್ಕ್ ನಲ್ಲಿ ಇರುವ ಬಗ್ಗೆ ತಿಳಿದು ಬಂದಿದೆ. ಸುದ್ದಿಯ ಪ್ರಕಾರ ಆಕೆ ಈಗ ಉನ್ನತ ಶಿಕ್ಷಣಕ್ಕೆಂದು ಹಾಗೂ ನಟನೆಯ ಬಗ್ಗೆ ಹೆಚ್ಚಿನ ಕಲಿಕೆ ಮಾಡಲೆಂದು ವಿದೇಶ ಯಾತ್ರೆಯಲ್ಲಿ ನಿರತಳಾಗಿದ್ದಾಳೆ. 
 
ಆದರೆ ಎಲ್ಲೇ ಹೋಗಲಿ, ಹೇಗೆ ಇರಲಿ ನಮ್ಮ ಮಣ್ಣಿನ ಸುವಾಸನೆ ಕಾಡುತ್ತದೆ. ಹಾಗೆ ಆಗಿದೆಯಂತೆ ರಮ್ಯ ವಿಷಯದಲ್ಲೂ. ಆಕೆ ಕನ್ನಡಿಗರ ಪ್ರೀತಿಯ ಚಿತ್ರಾನ್ನವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸುದ್ದಿ ಇದೆ. ಆಹಾರ, ಆಚರಣೆ, ಬಾಂಧವ್ಯ ಎಲ್ಲವು ಸಿಗೋದು ಸ್ವಂತ ಸ್ಥಳದಲ್ಲಿ..! ಅಂತಹ ಅನುಭವ ಈಗಾಗಲೇ ರಮ್ಯಾಗೆ ಆಗಿರ ಬಹುದು.. ಆಕೆ ಹೆಚ್ಚುದಿನಗಳು ಅಲ್ಲಿ ನಿಲ್ಲದೆ ಭಾರತಕ್ಕೆ ಹಿಂತಿರುಗುತ್ತಾಳೆ ಎನ್ನುವ ಅಚಲ ನಂಬಿಕೆ ಆಕೆಯ ಅಭಿಮಾನಿಗಳಲ್ಲಿ ಇದೆ. ಹಾಗೆ ಆಗಲಿ! 

ವೆಬ್ದುನಿಯಾವನ್ನು ಓದಿ