ಅನುಷ್ಕಾ ಮನೆಗೆ ಕಲ್ಲು ಹೊಡೆಯಲು ರಶೀದ್ ಖಾನ್ ಉತ್ತೇಜನ..?!

ಶುಕ್ರವಾರ, 27 ಮಾರ್ಚ್ 2015 (10:09 IST)
ಗೆದ್ದರೆ ಪೂಜೆ ಮಾಡುವ ಅಭಿಮಾನಿಗಳು ಅದೇ ಸೋತರೆ ಕಲ್ಲಿನಿಂದ ಹೊಡೆಯುತ್ತಾರೆ ಎನ್ನುವ ಮಾತಿದೆ. ಆದರೆ ಕಲ್ಲಿನಿಂದ ಹೊಡಿತಾರೋ ಬಿಡ್ತಾರೋ ಅವೆಲ್ಲ ಪಕ್ಕಕ್ಕೆ ಇಡೋಣ, ಆದರೆ ವಿಶ್ವಕಪ್ ಕ್ರಿಕೆಟ್ ಆಟದಲ್ಲಿ ಸೋತ ಭಾರತ ತಂಡದ ಬಗ್ಗೆ ಆಕ್ರೋಶ ತೋರುವುದಕ್ಕಿಂತ ಆ ಮ್ಯಾಚ್ ನೋಡಲು ಹೋದ ಪಾಪದ ನಟಿ ಮೇಲೆ ಕಲ್ಲು ತೂರಲು  ಉತ್ತೇಜನ ನೀಡುತ್ತಿದ್ದಾರೆ ಮಹಾನುಭಾವ ರಶೀದ್ ಖಾನ್. ಬಾಲಿವುಡ್ನ ಕ್ರಿಕೆಟ್ ಪ್ರೇಮಿ ರಶೀದ್ ಖಾನ್ ಸೋಲಿಗೆ ಅನುಷ್ಕಾ ಶರ್ಮಾರೇ ಮೂಲ ಕಾರಣವೆಂದು ಸಿಟ್ಟುಗೊಂಡಿದ್ದಾರೆ. 
ಭಾರತೀಯ ಕ್ರಿಕೆಟ್ ತಂಡದ ಅಪ್ಪಟ ಪ್ರೇಮಿಯಾಗಿರುವ ಬಾಲಿವುಡ್ ನಟ ಕಮಾಲ್ ರಶೀದ್ ಖಾನ್ ಸೆಮಿಫೈನಲ್ ಸೋಲಿಗೆ ವಿರಾಟ್ ಕೊಹ್ಲಿ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾ ಕಾರಣವಾಗಿದ್ದು, ಅನುಷ್ಕಾ ಮ್ಯಾಚ್ ನೋಡಲು ಆಸ್ಟ್ರೇಲಿಯಾ ತೆರೆಳಿದ್ದರ ಪರಿಣಾಮ ಕೊಹ್ಲಿಯಿಂದ ರನ್‌ಗಳಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದಿಯ ದೇಶದ್ರೋಹಿ ಚಿತ್ರದಲ್ಲಿ ನಾಯಕನಾಗಿ ಕಾಣಿಸಿದ್ದ  ಕೆ.ಆರ್.ಕೆ ನಂತರ ಸೂಪರ್ ಹಿಟ್ ಚಿತ್ರ ಏಕ್ ವಿಲನ್ ನಲ್ಲಿ ಕೂಡ ಪಾತ್ರ ಮಾಡಿದ್ದರು. 
 
ಭಾರತದ ತಂಡದ ಸೋಲಿಗೆ ಕಾರಣರಾದ ಅನುಷ್ಕಾ ಶರ್ಮಾರ ಮನೆಯ ಮೇಲೆ ಕಲ್ಲು ಹೊಡೆಯಿರಿ ಅಲ್ಲದೆ ಅನುಷ್ಕಾ ಶರ್ಮಾ ನಿಜವಾದ ದೇಶದ್ರೋಹಿಯಾಗಿದ್ದು ಇವರ ಚಿತ್ರಗಳನ್ನು ಬಹಿಷ್ಕರಿಸಲು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇನೆ ಎಂದು ಅನುಷ್ಕಾ ಬಗ್ಗೆ ಕಮಾಲ್ ರಶೀದ್ ಖಾನ್ ರ  ಈ ಹೇಳಿಕೆಯು ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ