ಪ್ರಶ್ನೆ ಮಾಡೋದೇ ತಪ್ಪಾ? ಟ್ರೋಲಿಗರಿಗೆ ರಿಯಲ್ ಸ್ಟಾರ್ ಉಪೇಂದ್ರ ಟಾಂಗ್

ಭಾನುವಾರ, 8 ಡಿಸೆಂಬರ್ 2019 (09:05 IST)
ಬೆಂಗಳೂರು: ಹೈದರಾಬಾದ್ ಎನ್ ಕೌಂಟರ್ ನೈಜತೆ ಕುರಿತು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅನುಮಾನ ವ್ಯಕ್ತಪಡಿಸಿದ್ದಕ್ಕೆ ನೆಟ್ಟಿಗರು ರಿಯಲ್ ಸ್ಟಾರ್ ಉಪೇಂದ್ರರನ್ನು ತರಾಟೆಗೆ ತೆಗೆದುಕೊಂಡಿದ್ದರು.


ಪೊಲೀಸರು ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಇವರೇ ನಾಲ್ವರು ನಿಜವಾದ ಆರೋಪಿಗಳು ಎಂಬುದಕ್ಕೆ ಸಾಕ್ಷ್ಯವೇನು ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಮೇಲೆ ಹಲವರು ಟೀಕಾ ಪ್ರಹಾರ ನಡೆಸಿದ್ದರು.

ಅದಕ್ಕೀಗ ಉತ್ತರ ಕೊಟ್ಟಿರುವ ಉಪ್ಪಿ ನುಡಿ ಮುತ್ತೊಂದನ್ನು ಉಲ್ಲೇಖಿಸಿ ಪ್ರಶ್ನೆ ಮಾಡುವುದೇ ತಪ್ಪಾ ಎಂದು ಪ್ರತಿಕ್ರಿಯಿಸಿದ್ದಾರೆ. ‘ಪ್ರಶ್ನೆ ಕೇಳುವ ವ್ಯಕ್ತಿ ಆ ಕ್ಷಣಕ್ಕೆ ಮೂರ್ಖನಂತೆ ಕಾಣಬಹುದು. ಆದರೆ ಪ್ರಶ್ನೆಯನ್ನೇ ಕೇಳದವನು ಜೀವನಪೂರ್ತಿ ಮೂರ್ಖನಾಗಿರುತ್ತಾನೆ’ ಎಂಬ ನುಡಿಮುತ್ತನ್ನು ಪ್ರಕಟಿಸಿ ಉಪೇಂದ್ರ ತಮ್ಮ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ