ತಮ್ಮ ಈ ನಡೆಗೆ ಸಿನಿಪ್ರಿಯರು ಆಘಾತ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ತಮ್ಮ ಕೋಪಕ್ಕೆ ಕಾರಣವಾಗಿರುವ ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದ್ದು, ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನಗೆ ನೋವಾಗಿದೆ. ಈ ಹೇಳಿಕೆ ನೀಡಿದ್ದೇಕೆ? ಈ ಕುರಿತು ಸುದೀಪ್ ಕ್ಲಾರಿಟಿ ನೀಡಲಿ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ದರ್ಶನ್ ಅವರ ಈ ಮುನಿಸಿಗೆ ಕಾರಣ, ಸುದೀಪ್ ಅವರು ಕೆಲ ವರ್ಷಗಳ ಹಿಂದೆ ನೀಡಿರುವ ಹೇಳಿಕೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ಮೆಜೆಸ್ಟಿಕ್( ದರ್ಶನ್ಗೆ ಬ್ರೇಕ್ ನೀಡಿದ ಚಿತ್ರ)ನಲ್ಲಿ ನಟಿಸಲು ಬಂದ ಅವಕಾಶವನ್ನು ನಾನು ನಿರಾಕರಿಸಿದ್ದೆ. ಅಲ್ಲದೇ ಈ ಅವಕಾಶವನ್ನು ದರ್ಶನ್ ಅವರಿಗೆ ನೀಡುವಂತೆ ಸೂಚಿಸಿದ್ದೆ ಎಂದು ಹೇಳುವುದರ ಮೂಲಕ ದರ್ಶನ್ ಅವರಿಗೆ ಅವಕಾಶ ಸಿಗಲು ತಾವೇ ಕಾರಣ ಎಂದು ಪ್ರತಿಪಾದಿಸಿದ್ದರು.