ಈ ಚಿತ್ರ ಆರಂಭದಲ್ಲಿ 135 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದು ಯುಗಾದಿ ಹಬ್ಬದ ಮುನ್ನಾದಿನ ಬಿಡುಗಡೆ ಆಗಿತ್ತು. ಆಗ ವಿಶ್ವ ಕಪ್ ಬಿಸಿ ಮತ್ತು ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅನುಮಾಸ್ಪದ ಸಾವಿನ ಗಲಾಟೆ ಎಲ್ಲವು ಒಂದು ಬಗೆಯ ಕ್ರಿಟಿಕಲ್ ವಾತಾವರಣ ಉಂಟು ಮಾಡಿತ್ತು. ಆದರೆ ಅವೆಲ್ಲದರ ನಡುವೆಯೂ ಅಜಯ್ ಚಿತ್ರ ಗೆದ್ದಿದೆ. ಆರಂಭಿಕ ವಾರದಲ್ಲಿ ಈ ಚಿತ್ರ 3.5 ಕೋಟಿಗಳಷ್ಟು ಗಳಿಕೆಯನ್ನು ಮೊದಲ ವಾರದಲ್ಲಿ ಮಾಡಿತ್ತು.
ಇದು ಅತ್ಯುತ್ತಮ ಗಳಿಕೆ ಎನ್ನುವ ಮಾತನ್ನು ಬಾಕ್ಸಾಫೀಸ್ ಮಂದಿ ಹೇಳಿದ್ದಾರೆ. ಆದರೆ ಕಳೆದ ವಾರ ಈ ಚಿತ್ರವೂ ಉಳಿದ ಭಾಷೆಯ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದೆ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರವೂ ಆಮೀರ್ ಹಾಂ ಪೀಕೆ ಚಿತ್ರವನ್ನು ಹಿಂದಿಕ್ಕಿತ್ತು. ಅದೇ ರೀತಿ ಈಗ ಕೃಷ್ಣಲೀಲಾ ಬೇರೆ ಭಾಷೆಯ ಚಿತ್ರಗಳನ್ನು ಹಿಂದಿಕ್ಕಿದೆ. ಈಗ ಕರ್ನಾಟಕ ದಾದ್ಯಂತ ಒಟ್ಟು 160 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಯಶಸ್ಸಿನ ಹಾದಿ ಮತ್ತಷ್ಟು ವಿಸ್ತಾರ ಮಾಡಿದೆ.