ಜಲಯಜ್ಞಕ್ಕೆ ಹೊರಟ ರಾಕಿಂಗ್ ಸ್ಟಾರ್ ಯಶ್ ಮೇಲೆ ಅಭಿಮಾನಿಗಳ ಹುಚ್ಚು ಅಭಿಮಾನ

ಮಂಗಳವಾರ, 28 ಫೆಬ್ರವರಿ 2017 (10:35 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪರದೆ ಮೇಲೆ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ಪಕ್ಕಾ ಮಾಸ್ ಹೀರೋ ಆಗಿದ್ದಾರೆ. ಯಶೋ ಮಾರ್ಗ ಎನ್ನುವ ಫೌಂಡೇಶನ್ ಆರಂಭಿಸಿ ಸಮಾಜ ಸೇವೆಗೆ ಮುಂದಾಗಿದ್ದಾರೆ.


ಬೇಸಿಗೆ ಬರುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಲ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತಮ್ಮಿಂದಾದ ಪ್ರಯತ್ನ ನಡೆಸುತ್ತಿರುವ ಯಶ್ ಶಹಾಪುರಕ್ಕೆಆಗಮಿಸಿದ ವೇಳೆ ಅಭಿಮಾನಿಗಳು ನಿಯಂತ್ರಿಸಲಾರದ ಸಂಖ್ಯೆಯಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು.

ಈ ಸಂದರ್ಭದಲ್ಲಿ ಯಶ್ ಗೆ ಗಾಯವಾಗಿದೆ ಮತ್ತು ಅವರ ಕಾರು ಜಖಂಗೊಂಡಿದೆ ಎಂದು ವರದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಯಶ್, ಅಂತಹದ್ದೇನೂ ಆಗಿಲ್ಲ. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು ನಿಜ. ಇವರನ್ನು ಚದುರಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ಹಾನಿಯಾಗಿದೆಯಷ್ಟೇ. ಇಂದು ಜಲ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ಮತ್ತಷ್ಟು ಕುಡಿಯುವ ನೀರಿನ ಯೋಜನೆಗಳಿಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯಶ್ ಹೆಜ್ಜೆಯಿಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ