ದೊಡ್ಮನೆ ಹುಡುಗ ಯುವರಾಜ್ ಸಿನಿಮಾಗೆ ವಿಶ್ ಮಾಡಿದ ರಾಕಿ ಭಾಯಿ ಯಶ್

ಭಾನುವಾರ, 1 ಮೇ 2022 (09:58 IST)
ಬೆಂಗಳೂರು: ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವರಾಜ್ ಕುಮಾರ್ ನಾಯಕರಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿತ್ತು. ಈ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ.

ಸಂತೋಷ್ ಆನಂದ್ ರಾಮ್ ಈ ಮೊದಲು ರಾಕಿಂಗ್ ಸ್ಟಾರ್ ಯಶ್ ದಂಪತಿ ಅಭಿನಯಿಸಿದ್ದ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಸಿನಿಮಾ ಮಾಡಿದ್ದರು. ಹೀಗಾಗಿ ಯಶ್ ಸಂತೋಷ್ ಆನಂದ್ ರಾಮ್ ಗೆ ಶುಭ ಕೋರಿದ್ದಾರೆ.

ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ತಮ್ಮ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟ ಸಿನಿಮಾ ಎಂದು ಯಶ್ ಯಾವಾಗಲೂ ಹೇಳುತ್ತಿರುತ್ತಾರೆ. ಯುವರಾಜ್ ಕುಮಾರ್ ಗೂ ಅಂತಹದ್ದೇ ಯಶಸ್ಸು ಸಿಗಲಿ ಎಂದು ಅವರು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ