ದಕ್ಷ ಚಿತ್ರ ಜನರ ಮುಂದೆ ಇಡುವ ಹುಮ್ಮಸ್ಸಿನಲ್ಲಿ ಎಸ್ ನಾರಾಯಣ್

ಶನಿವಾರ, 27 ಡಿಸೆಂಬರ್ 2014 (09:56 IST)
ದುನಿಯಾ ವಿಜಯ್ ನಟನೆಯ ಮತ್ತು ಎಸ್ ನಾರಾಯಣ್ ಅವರ ನಿರ್ದೇಶನದ ಚಿತ್ರ ದಕ್ಷ ಈಗ  ಕೊನೆಯ ಹಂತಕ್ಕೆ ಬಂದು ತಲುಪಿದೆ. ಪ್ರೇಕ್ಷಕರನ್ನು ನಾನು ಎರಡು ಗಂಟೆ ಇಪ್ಪತ್ತು ನಿಮಿಷ ಒಂದೇ ಕಡೆ ಕೂಡಿಸಲು ಅಗತ್ಯ ಇರುವ ಕೆಲಸ ಮಾಡ ಬೇಕಿದೆ. ಅದರ ಹೊಣೆ ನನ್ನ ಮೇಲಿದೆ ಎಂದು ಹೇಳಿರುವ  ನಾರಾಯಣ್ ಈ ಚಿತ್ರ ಎರಡು ವಾರದ ಒಳಗೆ ಸೆನ್ಸಾರ್ ಬೋರ್ಡ್ ಗೆ ಹೋಗುತ್ತದೆ  ಎಂದು ಹೇಳಿದ್ದಾರೆ.
ಈ ಚಿತ್ರ ತುಂಬಾ ಚಂದದ ಕಥೆ ಹೊಂದಿದೆ ಹಾಗೂ ನಾಯಕನ ಡೈಲಾಗ್  ಹೇಳುವ ಪರಿ ಎಲ್ಲವೂ ಅದ್ಭುತವಾಗಿದೆ ಎನ್ನುವ ಮೆಚ್ಚುಗೆ ಕೇಳಿ ಬಂದಿದೆ. ಈ ಸಂಗತಿಯು ಸಹಿತ ನಾರಾಯಣ್ ಅವರಲ್ಲಿ ಉತ್ಸಾಹ ಹೆಚ್ಚಿಸಿದೆ.
 
ಸಣ್ಣಮಟ್ಟದ ವೈಮನಸ್ಯದಿಂದ ಈ ಚಿತ್ರದ ಶೂಟಿಂಗ್  ಕುಂಠಿತವಾಗಿತ್ತು. ಈಗ ವಿಜಿ ಮತ್ತು ನಾರಾಯಣ್ ಅವೆಲ್ಲ ಪಕ್ಕಕ್ಕೆ ಇಟ್ಟು ಚಿತ್ರದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಂದಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ