ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ ಎಂದ ನೆಟ್ಟಿಗನಿಗೆ ತಕ್ಕ ತಿರುಗೇಟು ನೀಡಿದ ಸಮಂತಾ

ಶನಿವಾರ, 28 ಮೇ 2022 (09:30 IST)
ಹೈದರಾಬಾದ್: ನಾಗಚೈತನ್ಯಗೆ ವಿಚ್ಛೇದನ ನೀಡುವ ನಿರ್ಧಾರ ಪ್ರಕಟಿಸಿದ ಮೇಲೆ ನಟಿ ಸಮಂತಾ ಋತು ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ತಮ್ಮ ನೆಚ್ಚಿನ ಸಾಕು ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಯೋಗ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿದ ನೆಟ್ಟಿಗನೊಬ್ಬ ‘ಸಾಯುವಾಗ ನೀವು ಏಕಾಂಗಿಯಾಗಿರುತ್ತೀರಿ’ ಎಂದು ಕಾಮೆಂಟ್ ಮಾಡಿದ್ದ.

ಈ ಕಾಮೆಂಟ್ ಗೆ ಸಮಂತಾ ತಮಾಷೆಯಾಗಿಯೇ ತಿರುಗೇಟು ನೀಡಿದ್ದಾರೆ. ‘ಹಾಗಿದ್ದರೆ ನಾನು ತುಂಬಾ ಅದೃಷ್ಟವಂತೆ ಎಂದುಕೊಳ್ಳುತ್ತೇನೆ’ ಎಂದಿದ್ದಾರೆ. ಇದಾದ ಬಳಿಕ ನೆಟ್ಟಿಗ ತನ್ನ ಕಾಮೆಂಟ್ ನ್ನು ಅಳಿಸಿ ಹಾಕಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ