ವಿಚ್ಛೇದನ ಬಳಿಕ ಆಶ್ರಮ ಸೇರಿಕೊಂಡ ಸಮಂತಾ!

ಗುರುವಾರ, 21 ಅಕ್ಟೋಬರ್ 2021 (09:10 IST)
ಹೈದರಾಬಾದ್: ನಾಗಚೈತನ್ಯ ಜೊತೆಗಿನ ವಿಚ್ಛೇದನ ಬಳಿಕ ಮಾನಸಿಕವಾಗಿ ನೊಂದಿರುವ ಸಮಂತಾ ಋತು ಪ್ರಭು ಈಗ ಆಶ್ರಮ ಸೇರಿಕೊಂಡಿದ್ದಾರೆ!


ಸಮಂತಾ ಈಗ ಕೆಲವು ದಿನಗಳ ಬ್ರೇಕ್ ಪಡೆದುಕೊಂಡಿದ್ದು, ರಿಷಿಕೇಷದಲ್ಲಿರುವ ಸ್ವಾಮಿ ಪುರುಷೋತ್ತಮ ನಂದ ಆಶ್ರಮ ಸೇರಿಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡಿರುವ ಸಮಂತಾ ಕೆಲವು ಕಾಲ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ವಿಚ್ಛೇದನ ಸುದ್ದಿ ಪ್ರಕಟಿಸಿದ ಮೇಲೆ ಸಮಂತಾ-ನಾಗಚೈತನ್ಯ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಲೇ ಇವೆ. ಇವೆಲ್ಲಾ ರಗಳೆಗಳಿಂದ ದೂರವಿದ್ದು, ಇಲ್ಲಿ ನಿಸರ್ಗದ ಮಡಿಲಲ್ಲಿ ಖುಷಿಯಿಂದ ಕಾಲ ಕಳೆಯಲು ಸಮಂತಾ ಬ್ರೇಕ್ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ