ಸೋಷಿಯಲ್ ನೆಟ್‌ವರ್ಕ್‌ನಲ್ಲೂ ಸಿಗದ ಸಮಂತಾ...!

ಬುಧವಾರ, 25 ಫೆಬ್ರವರಿ 2015 (09:58 IST)
ಈಗಸೋಷಿಯಲ್ ನೆಟ್ ವರ್ಕ್ ಕಾಲ. ಅದರಿಂದ ಈಗ ವ್ಯಕ್ತಿಗಳ ನಡುವೆ ಇರುವಂತಹ ಅಂತರ ಕಡಿಮೆ ಆಗಿದೆ ಎಂದೇ ಹೇಳ ಬಹುದಾಗಿದೆ. ಅದರಲ್ಲೂ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ ಅಪ್ ನಂತಹವುಗಳು ಪ್ರತಿಯೊಬ್ಬರನ್ನು ಅತಿಯಾಗಿ ಹತ್ತಿರಮಾಡಿದೆ ಎಂದೇ ಹೇಳಬಹುದು. ಅದರಲ್ಲೂ ಸಿನಿ ತಾರೆಗಳು, ಕ್ರಿಕೆಟ್, ರಾಜಕೀಯ ಕ್ಷೇತ್ರದಲ್ಲಿ  ಸಾಧನೆ ಮಾಡಿರುವಂತಹ ಸಾಧಕರು ಅತಿ ಸುಲಭದಲ್ಲಿ ಈ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ತಮ್ಮ ಮನದ ಭಾವನೆಗಳನ್ನು ಹೇಳುತ್ತಾ, ತಮ್ಮ ಹೆಸರು ಹೆಚ್ಚು ಮಾಡಿಕೊಳ್ಳುತ್ತಿದ್ದುದು ಉಂಟು. 
ಕೆಲವರು ಈ ರೀತಿಯ ಸೋಷಿಯಲ್ ನೆಟ್ ವರ್ಕ್ ಜೊತೆಯಾದ ಅತಿಯಾದ ಬಂಧ ಹೊಂದಿದ್ದಾರೆ ಅವರಲ್ಲಿ ನಟಿ ಸಮಂತ ಸಹಿತ ಒಬ್ಬಳಾಗಿದ್ದಾಳೆ ಆಕೆ ಬಗ್ಗೆ ಹೇಳುವುದಾದರೆ ಈ ಮುದ್ದು ಮೊಗದ ಚೆಲುವೆ ಸದಾ ಏನಾದರೊಂದು ವಿವಾದಪೂರಿತ ಮಾತುಗಳನ್ನು ಹೇಳುತ್ತಾ ಜನರ ಹಾಗೂ ಮಾಧ್ಯಮಗಳ ಕಣ್ಣಿಗೆ ಕಾಣುವಂತಹವಳು ಎಂದೇ ಹೇಳ ಬಹುದಾಗಿದೆ. 
 
ಟ್ವಿಟ್ಟರ್ ಮೂಲಕ ಸದಾ ಸುದ್ದಿಯಲ್ಲಿರುವ ಈ ತಾರೆ ಸಧ್ಯಕ್ಕೆ ಅದರಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾಳಂತೆ ಆ ಮೂಲಕ ಅವಳ ಅಭಿಮಾನಿಗಳಿಗೆ ಬೇಸರ ಉಂಟು ಮಾಡುತ್ತಿದ್ದಾಳೆ. ಸಿದ್ಧಾರ್ಥ್ ಜೊತೆಗಿನ ಆಕೆಯ ಬಾಂಧವ್ಯ ಹಾಳಾದ ಬಳಿಕ ಆಕೆಯ ಮನಕ್ಕೆ ಶಾಂತಿಯ ಅಗತ್ಯ ಇರುವುದರಿಂದ ಈ ರೀತಿಯ ಒಂದು ನಿರ್ಧಾರ ಕೈಗೊಂಡಿದ್ದಾಳೆ ಎನ್ನುವುದನ್ನು ಆಕೆಯ ಆಪ್ತರು ಹೇಳುತ್ತಿದ್ದಾರೆ. ಅದು ಸರಿ ಅನ್ನಿ ಮನಸ್ಸು ಸರಿ ಇದ್ದಾಗ ಮಾತ್ರ ಎಲ್ಲ ಚಂದ. ಇಲ್ಲದಿದ್ದರೆ ತಂಪಾದ ಗಾಳಿಯು ಸಹಿತ ಬಿಸಿಯಾಗಿ ಚರ್ಮವನ್ನು ಸುಡುತ್ತದೆ. 
 

ವೆಬ್ದುನಿಯಾವನ್ನು ಓದಿ